Advertisement

ಪಡಿತರ ವಂಚನೆ: ಪರಿಶೀಲನೆ

05:23 PM Oct 26, 2022 | Team Udayavani |

ಕನಕಪುರ: ಪಡಿತರ ವಿತರಣೆಯಲ್ಲಿ ವಂಚನೆ ಮಾಡುತ್ತಿರುವ ಬೂದಿಗುಪ್ಪೆ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲೂಕು ಅಧ್ಯಕ್ಷ ಸುರೇಶ್‌ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Advertisement

ನಗರದ ಹೊರ ಹೊಲಯದಲ್ಲಿರುವ ಬೂದಿಗುಪ್ಪೆ ಗ್ರಾಮದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ಪಡಿತರ ಫ‌ಲಾನುಭವಿಗಳಿಗೆ ವಂಚನೆ ಮಾಡುತ್ತಿದ್ದಾರೆ. ಬಿಪಿಎಲ್‌ ಪಡಿತರ ಹೊಂದಿರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರ ನಿಗದಿಪಡಿಸಿದೆ. ಆದರೆ, ಬೂದಿಗುಪ್ಪೆ ನ್ಯಾಯಬೆಲೆ ಅಂಗಡಿಯಲ್ಲಿ 10 ಕೆಜಿ ಬದಲು ತಲಾ ಎಂಟು ಕೆಜಿ ವಿತರಣೆ ಮಾಡಿ, ಪಡಿತರದಾರರಿಗೆ ವಂಚನೆ ಮಾಡುತ್ತಿರುವುದು ಅಲ್ಲದೆ, ಪಡಿತರ ಫ‌ಲಾನುಭವಿಗಳಿಂದ ನಿಯಮ ಬಾಹಿರವಾಗಿ 10 ರೂ.ಲಂಚ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ.

ಪಡಿತರ ವಿತರಣೆಯಲ್ಲಿ ಕುಟುಂಬ ಒಂದಕ್ಕೆ 10 ಕೆ.ಜಿಯಷ್ಟು ಪಡಿತರ ವಂಚಿಸಲಾಗುತ್ತಿದೆ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ಯಾವ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ ಎಂಬ ಯಾವುದೇ ನಾಮಫ‌ಲಕವನ್ನು ಹಾಕದೆ, ಜನರನ್ನು ವಂಚಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲಿಕರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next