Advertisement

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

08:24 AM Oct 20, 2021 | Team Udayavani |

“ನಮ್ಮ ಜೀವನದಲ್ಲಿ ನಮಗಿಂತ ಹೆಚ್ಚಾಗಿ ಬೇರೆಯವರು ಹಸ್ತಕ್ಷೇಪ ಮಾಡಲು ಅಧಿಕಾರ ಕೊಟ್ಟಿರುತ್ತೇವೆ. ಆದರೆ ನಮ್ಮ ಜೀವನ ನಮಗೆ ಅತಿ ಮುಖ್ಯವಾಗಿರುವುದರಿಂದ ನಮ್ಮ ನಿರ್ಧಾರ ನಮ್ಮದೇ ಆಗಿರಬೇಕು’ – ಈ ಜೀವನ ಅನುಭವದ ಫಿಲಾಸಫಿ ಮಾತನ್ನು ಯಾರೋ, ಸಾಹಿತಿಗಳ್ಳೋ, ಚಿಂತಕರೋ ಅಥವಾ ಪರ್ಸನಾಲಿಟಿ ಡೆವಲೆಪ್‌ಮೆಂಟ್‌ ಟ್ರೈನರ್‌ಗಳ್ಳೋ ಹೇಳಿದ್ದು ಅಂದುಕೊಂಡರೆ ನಿಮ್ಮ ಊಹೆ ತಪ್ಪು!

Advertisement

ಅಂದಹಾಗೆ, ಇಂಥದ್ದೊಂದು ಜೀವನ ಅನುಭವದ ನುಡಿಮುತ್ತುಗಳನ್ನು ಹೇಳಿದ್ದು ನಟಿ ರಶ್ಮಿಕಾ ಮಂದಣ್ಣ. ಹೌದು, ಯಾವಾಗಲೂ ಸಿನಿಮಾ, ಮತ್ತಿತರ ಕಾಂಟ್ರವರ್ಸಿ ಹೇಳಿಕೆಗಳ ಮೂಲಕವೇ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದ ರಶ್ಮಿಕಾ ಬಾಯಲ್ಲಿ ಇಂಥ ಸೀರಿಯಸ್‌ ವಿಷಯದ ಬಗ್ಗೆ ಮಾತೇ ಎಂದು ನೀವು ಹುಬ್ಬೇರಿಸಬಹುದು.

ಆದರೂ ಇದು ಸತ್ಯ. ತಮ್ಮ ಟ್ವಿಟ್ಟರ್‌ನಲ್ಲಿ ತುಂಬ ಗಂಭೀರವೆನಿಸುವಂಥ ವಿಷಯವನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಬದುಕು, ಭಾವನೆಗಳು, ಸಂಬಂಧಗಳ ಬಗ್ಗೆ ಮಾತನಾಡಿ ದ್ದಾರೆ. ಒಟ್ಟಾರೆ ರಶ್ಮಿಕಾ ಮಂದಣ್ಣ ಅವರ ಇಂಥದ್ದೊಂದು ಟ್ವೀಟ್‌ ನೋಡಿ ರಶ್ಮಿಕಾಗೆ ವೈರಾಗ್ಯ ಏನಾದ್ರೂ ಕಾಡುತ್ತಿದೆಯಾ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next