Advertisement

ಅರ್ಜುನ್ ತೆಂಡೂಲ್ಕರ್ ಬೇರೆ ತಂಡದಲ್ಲಿ ಇರಬೇಕಿತ್ತು…: ರಶೀದ್ ಲತೀಫ್

07:01 PM Apr 21, 2023 | Team Udayavani |

ಮುಂಬೈ: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ಬೌಲಿಂಗ್‌ನಲ್ಲಿ ವೇಗವನ್ನು ಸೃಷ್ಟಿಸಲು ಸಾಧ್ಯವಾಗದಿರಬಹುದು ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಕಳೆದ ವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಅರ್ಜುನ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು, ಸನ್‌ ರೈಸರ್ಸ್ ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಔಟ್ ಮಾಡಿದರು. ಅರ್ಜುನ್‌ ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಅರ್ಜುನ್ ಸಮತೋಲನ ಸರಿಯಾಗಿಲ್ಲದ ಕಾರಣ ಅವನ ದೇಹದ ಮೇಲೆ ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಲತೀಫ್ ಸಲಹೆ ನೀಡಿದರು.

“ಅರ್ಜುನ್ ತನ್ನ ಆರಂಭಿಕ ಹಂತದಲ್ಲಿ ಇದ್ದಾನೆ. ಅವನು ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಅವನ ಸಮತೋಲನ ಚೆನ್ನಾಗಿಲ್ಲ, ಅವನು ವೇಗವನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಒಬ್ಬ ಉತ್ತಮ ಬಯೋಮೆಕಾನಿಕಲ್ ಸಲಹೆಗಾರ ಅವನಿಗೆ ಮಾರ್ಗದರ್ಶನ ನೀಡಿದರೆ, ಬಹುಶಃ ಅವನ ಬೌಲಿಂಗ್‌ ನ ವೇಗ ಹೆಚ್ಚಿಸಬಹುದು. ಸಚಿನ್ ಅದನ್ನು ಸ್ವತಃ ಮಾಡಬಹುದಿತ್ತು ಆದರೆ ಅದಕ್ಕಾಗಿ ಅವರು ದೇಶೀಯ ಕ್ರಿಕೆಟ್‌ ನ ಮೇಲೆ ಅವಲಂಬಿತರಾಗಿದ್ದರು. ಅವನ ಬ್ಯಾಲೆನ್ಸ್ ಚೆನ್ನಾಗಿಲ್ಲ, ಮತ್ತು ಅದು ಅವನ ವೇಗದ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಲತೀಫ್ ಎಂದು ತಮ್ಮ ಯೂಟ್ಯೂಬ್ ಚಾನೆಲ್ ‘ಕಾಟ್ ಬಿಹೈಂಡ್’ ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಗೆದ್ದ ಖುಷಿಯಲ್ಲಿ ಶಿವಾಜಿ ಸುರತ್ಕಲ್‌-2: ಮುಂದಿನ ಭಾಗಕ್ಕೆ ತಯಾರಿ

ಮುಂಬೈ ಕ್ಯಾಂಪ್‌ ನಲ್ಲಿ ಅವರ ತಂದೆ ಸಚಿನ್ ಉಪಸ್ಥಿತಿಯನ್ನು ಹೈಲೈಟ್ ಮಾಡುವಾಗ, ಲತೀಫ್ ಅವರು ಬೇರೆ ಯಾವುದಾದರೂ ಫ್ರಾಂಚೈಸಿಗಾಗಿ ಆಡುತ್ತಿದ್ದರೆ ಅರ್ಜುನ್ ಅವರ ಮನಸ್ಥಿತಿ ವಿಭಿನ್ನವಾಗಿರುತ್ತಿತ್ತು ಎಂದು ಸಲಹೆ ನೀಡಿದರು.

Advertisement

“ಅವರು ಬೇರೆ ಫ್ರಾಂಚೈಸಿಗಾಗಿ ಆಡುತ್ತಿದ್ದರೆ ಅವರ ವರ್ತನೆ ವಿಭಿನ್ನವಾಗಿರುತ್ತದೆ. ಇದೀಗ, ಅವರ ತಂದೆ ಕೂಡ ಡ್ರೆಸ್ಸಿಂಗ್ ರೂಮ್ನಲ್ಲಿದ್ದಾರೆ. ಅವರ ತಂದೆಯ ಪಾತ್ರಗಳು ಈಗ ಅವರ (ಕ್ರಿಕೆಟ್ ಅಲ್ಲದ) ಜೀವನದಲ್ಲಿ ಇರಬೇಕು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next