Advertisement

ವಿಜಯಪುರ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ: ಬಿಜೆಪಿ ಖಂಡನೆ

10:49 AM Dec 25, 2017 | Team Udayavani |

ಮಹಾನಗರ: ವಿಜಯಪುರ ಆದರ್ಶನಗರ ಪೋಲಿಸ್‌ ಠಾಣಾ ವ್ಯಾಪ್ತಿಯಲ್ಲಿ ದಾನಮ್ಮ ಎಂಬ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯು ಒಂದು ಹೀನ ಕೃತ್ಯವಾಗಿದ್ದು, ಈ ಹತ್ಯೆಯನ್ನು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸಿದೆ.

Advertisement

ಇಂತಹ ಅಮಾನವೀಯ, ಭೀಭತ್ಸ ಘಟನೆಗಳಿಂದ ಈ ರಾಜ್ಯದಲ್ಲಿ ಮಹಿಳೆಯರಿಗೆ ಯಾವ ವಿಧದಲ್ಲೂ ರಕ್ಷಣೆ ಇಲ್ಲವೆಂಬುದು ಸಾಬೀತಾಗಿದೆ. ಸಿದ್ದರಾಮಯ್ಯ ಸರಕಾರವು ನಿದ್ರಾವಸ್ಥೆಯಲ್ಲಿದ್ದು, ಇದರ ಭದ್ರತಾ ವೈಫಲ್ಯಕ್ಕೆ ಜಯಪುರದ ಈ ಘಟನೆಯೇ ಸಾಕ್ಷಿ ನುಡಿಯುವಂತಿದೆ.

ಈ ಬಗ್ಗೆ ಸರಕಾರವು ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸಿ ದಾನಮ್ಮಳ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್‌, ರಾಜೀವಿ ಕೆಂಪು ಮಣ್ಣು, ಜಿಲ್ಲಾ ಕಾರ್ಯದರ್ಶಿ ಪ್ರಭಾ ಮಾಲಿನಿ, ಮಂಡಲದ ಪದಾಧಿಕಾರಿಗಳಾದ ಪೂರ್ಣಿಮಾ ಎಸ್‌. ರಾವ್‌, ವೀಣಾ ಮಂಗಳ, ಪೂರ್ಣಿಮಾ ಅಶೋಕ್‌ ರಾವ್‌, ಬಬಿತಾ ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next