Advertisement

ಅಪ್ರಾಪ್ತೆ ಮೇಲೆ ಅತ್ಯಾಚಾರ: ನಾಲ್ವರ ಸೆರೆ

11:12 PM Feb 11, 2020 | Team Udayavani |

ಸುಬ್ರಹ್ಮಣ್ಯ: ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.ಸುಬ್ರಹ್ಮಣ್ಯದ ಅಪ್ರಾಪ್ತೆ, ಗರ್ಭಿಣಿಯಾದ ಬಳಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಲಾಗಿರುವ ಯುವಕರು, ನೀಡಿದ್ದ ಗರ್ಭಪಾತದ ಮಾತ್ರೆ ಸೇವಿಸಿದ್ದಳು.

Advertisement

ಬಳಿಕ ವಿಪರೀತ ರಕ್ತಸ್ರಾವವಾದ್ದರಿಂದ ವಿಷಯಮನೆಯವರ ಗಮನಕ್ಕೆ ಬಂದಿತ್ತು. ಆ ನಂತರ ಪೊಲೀಸ್‌ ದೂರು ದಾಖ ಲಿಸಲಾಗಿತ್ತು. ಸಂತ್ರಸ್ತೆ ಮೊದಲು ಸಂಕೇತ್‌ ಮತ್ತು ವೆಂಕಟೇಶ್‌ ಎಂಬವರ ಮೇಲೆ ದೂರು ನೀಡಿದ್ದು, ವಿಚಾರಣೆ ವೇಳೆ ದುರ್ಗಾಪ್ರಸಾದ್‌, ಚಂದ್ರಶೇಖರ, ಡಿಕೇಶ್‌ ಹಾಗೂ ಅಶೋಕ್‌ ಎಂಬವರೂ ಭಾಗಿಯಾಗಿದ್ದರೆಂದು ತಿಳಿಸಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next