Advertisement

ರಣಜಿ: ಪಾಂಡೆ ಗೈರಲ್ಲಿ ಕರುಣ್‌ ನಾಯರ್‌ ನಾಯಕ

12:10 AM Dec 05, 2019 | Sriram |

ಬೆಂಗಳೂರು: ಸೋಮವಾರದಿಂದ ತಮಿಳುನಾಡು ವಿರುದ್ಧ ದಿಂಡಿಗಲ್‌ನಲ್ಲಿ ಆರಂಭವಾಗಲಿರುವ ರಣಜಿ ಕ್ರಿಕೆಟ್‌ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

Advertisement

ಮನೀಷ್‌ ಪಾಂಡೆ ಅನುಪಸ್ಥಿತಿಯಲ್ಲಿ ಕರುಣ್‌ ನಾಯರ್‌ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್‌ ಗೋಪಾಲ್‌ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ಈ ಸಲ ರಾಜ್ಯ ತಂಡ ಕೂಡಿಕೊಂಡಿರುವ ಹೊಸಮುಖವೆಂದರೆ ಮಧ್ಯಮ ವೇಗಿ ಕೆ.ಎಸ್‌. ದೇವಯ್ಯ.

ಕರ್ನಾಟಕ ತಂಡ: ಕರುಣ್‌ ನಾಯರ್‌ (ನಾಯಕ), ಮಾಯಾಂಕ್‌ ಅಗರ್ವಾಲ್‌, ದೇವದತ್ತ ಪಡಿಕ್ಕಲ್‌, ಡಿ.ನಿಶ್ಚಲ್‌, ಆರ್‌. ಸಮರ್ಥ್, ಪವನ್‌ ದೇಶಪಾಂಡೆ, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಬಿ.ಆರ್‌. ಶರತ್‌, ಶರತ್‌ ಶ್ರೀನಿವಾಸ್‌, ರೋನಿತ್‌ ಮೋರೆ, ಡೇವಿಡ್‌ ಮಥಾಯಿಸ್‌, ವಿ. ಕೌಶಿಕ್‌, ಕೆ.ಎಸ್‌.ದೇವಯ್ಯ.

Advertisement

Udayavani is now on Telegram. Click here to join our channel and stay updated with the latest news.

Next