ಇವರು ಯಾರೂ ತಾನು ಸತ್ತ ನಂತರ ಹಿಂಬಾಲಿಸದಿದ್ದ ಮೇಲೆ ಇವರೊಡನೆ ಬದುಕುವುದು ನಿರರ್ಥಕ ಎನ್ನಿಸತೊಡಗಿತು. ಮತ್ತೆ ಜ್ಯೋತಿಷಿಯ ಬಳಿ ತೆರಳಿ ತನ್ನ ದುಃಖವನ್ನು ತೋಡಿಕೊಂಡನು. ಜ್ಯೋತಿಷಿ ಒಂದು ಪ್ರಶ್ನೆ ಕೇಳಿದನು “ನಿನ್ನ ಅಣ್ಣ ತಮ್ಮಂದಿರು ಅದೇ ಪ್ರಶ್ನೆಯನ್ನು ನಿನಗೆ ಕೇಳಿದ್ದಿದ್ದರೆ ನೀನು ಅವರನ್ನು ಹಿಂಬಾಲಿಸುತ್ತಿದ್ದೆಯಾ?’. ರಂಗಪ್ಪ “ಇಲ್ಲಾ ನನ್ನ ಪತ್ನಿಯನ್ನು ಒಬ್ಬಳೇ ಬಿಟ್ಟು ಹೇಗೆ ಹೋಗುವುದು?’ ಎಂದನು. ಜ್ಯೋತಿಷಿ “ಒಂದು ವೇಳೆ ಪತ್ನಿಯೇ ಆ ಪ್ರಶ್ನೆಯನ್ನು ನಿಮಗೆ ಕೇಳಿದ್ದರೆ?’ ಎಂದು ಪ್ರಶ್ನಿಸಿದಾಗ ರಂಗಪ್ಪ, ಮಗನನ್ನು ಬಿಟ್ಟು ಹೇಗೆ ಹೋಗುವುದು?’ ಎಂದನು. ರಂಗಪ್ಪನಿಗೆ ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಸಾಯುವಾಗ ನಮ್ಮನ್ನು ಹಿಂಬಾಲಿಸುವುದು ನಮ್ಮ ಕರ್ಮಫಲವೇ ಹೊರತು ಬೇರೆ ಯಾರೂ ಅಲ್ಲ ಎಂಬುದು ರಂಗಪ್ಪನಿಗೆ ಅರ್ಥವಾಗಿತ್ತು.
Advertisement
ಗಣೇಶ ಭಟ್ಟ, ಕುಮಟಾ