Advertisement

ಕುರಿ ಖರೀದಿಗೆ ಕುರಿ ಸಂತೆಗೆ ಬಂದ ರಮೇಶ್‌ ಕುಮಾರ್‌

10:18 AM Dec 15, 2019 | Team Udayavani |

ಕೋಲಾರ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಶನಿವಾರ ಬೆಳ್ಳಂಬೆಳಗ್ಗೆ ಶ್ರೀನಿವಾಸಪುರ ಕ್ಷೇತ್ರಕ್ಕೆ ಹೊಂದಿಕೊಂಡಂತಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಲಾ ಗ್ರಾಮದ ಕುರಿ ಸಂತೆಗೆ ಆಗಮಿಸಿ, ಕುರಿ ಖರೀದಿಸಿದರು.

Advertisement

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಅಡ್ಡಗಲ್‌ನಲ್ಲಿರುವ ತಮ್ಮ ತೋಟದಲ್ಲಿ ಅವರು ಕುರಿಗಳನ್ನು ಸಾಕುತ್ತಿದ್ದು, ಅದಕ್ಕಾಗಿ ಕುರಿ ಖರೀದಿಸಲು ಕುರಿಗಳ ಸಂತೆಗೆ ಆಗಮಿಸಿದ್ದರು. ರೈತರ ಗೆಟಪ್‌ನಲ್ಲಿ ತಲೆಗೆ ರುಮಾಲು ಸುತ್ತಿಕೊಂಡು ನಿಂತಿರುವ ಅವರ ಚಿತ್ರಗಳು ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇತ್ತೀಚೆಗೆ ನಡೆದ ಉಪ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಶಾಸಕರು ಕುರಿ-ಕೋಳಿಯಂತೆ ಮಾರಾಟವಾಗಿದ್ದಾರೆ ಎಂದು ಅವರು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next