Advertisement

ಸ್ವಪಕ್ಷೀಯರಿಂದಲೇ ಅನ್ಯಾಯ : ರಮೇಶ್‌ ಜಾರಕಿಹೊಳಿ ಆಕ್ರೋಶ

01:10 AM Jun 26, 2021 | Team Udayavani |

ಬೆಳಗಾವಿ/ಮೈಸೂರು : ಬಿಜೆಪಿಯಲ್ಲೇ ಕೆಲವರಿಂದ ನನಗೆ ಅನ್ಯಾಯವಾಗಿದ್ದು, ಅವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ…
– ಇದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಆಕ್ರೋಶದ ಮಾತು. ಯಾರಿಂದ ಅನ್ಯಾಯ ಆಗಿದೆ ಎಂಬುದನ್ನು ಈಗಲೇ ಹೇಳುವುದಿಲ್ಲ. 8-10 ದಿನಗಳಲ್ಲಿ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದು ಅವರು ಬೆಳಗಾವಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

Advertisement

ಫ‌ಡ್ನವೀಸ್‌ ಗಾಡ್‌ ಫಾದರ್‌
ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ನನ್ನ ರಾಜಕೀಯ ಗಾಡ್‌ಫಾದರ್‌. ಈ ಹಿಂದೆ ಬೆಳಗಾವಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವೇಳೆ ನಾನು ಆಗಿನ ಸಮ್ಮಿಶ್ರ ಸರಕಾರ ಪತನಗೊಳಿಸುವ ನಿರ್ಧಾರ ಮಾಡಿದ್ದೆ. ಈ ಸಂಬಂಧ ಪುಣೆಯಲ್ಲಿ ಸೆ. 7ರಂದು ಆಗ ಸಿಎಂ ಆಗಿದ್ದ ಫಡ್ನವೀಸ್‌ ಜತೆ ಮಾತುಕತೆ ನಡೆಸಿದ್ದೆ ಎಂದರು.

ಬಿಜೆಪಿ ತ್ಯಜಿಸುವುದಿಲ್ಲ
ಸುತ್ತೂರು ಶ್ರೀಗಳ ಭೇಟಿಗಾಗಿ ಮೈಸೂರಿಗೆ ಆಗಮಿಸಿದ್ದ ರಮೇಶ್‌, ನನ್ನೊಂದಿಗೆ ಯಾರೂ ಮುಂಬಯಿಗೆ ಬಂದಿರಲಿಲ್ಲ. ಯಾರೂ ನನ್ನ ಜತೆ ರಾಜೀನಾಮೆ ನೀಡುವುದಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಬಿಜೆಪಿಯಲ್ಲೇ ಇರುತ್ತೇನೆ. ಕಾಂಗ್ರೆಸ್‌ಗೆ ಮರಳುವುದಿಲ್ಲ. 20 ವರ್ಷಗಳಿಂದ ಸಿಗದ ಗೌರವ ಬಿಜೆಪಿಯಲ್ಲಿ ಸಿಕ್ಕಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next