Advertisement

ಡಿಕೆಶಿ ವಿರುದ್ಧ ಬಳಸಿದ ಅಸಭ್ಯ ಪದಕ್ಕೆ ವಿಷಾದ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ

08:00 PM Mar 27, 2021 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಬಳಸಿದ್ದ ಅಸಭ್ಯ ಪದಕ್ಕೆ ಶಾಸಕ ರಮೇಶ್ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ಶನಿವಾರ ಸಂಜೆ ಸಿಡಿ ಪ್ರಕರಣದ ವಿಚಾರಕ್ಕೆ ಡಿಕೆಶಿ ವಿರುದ್ಧ ರೋಷದಿಂದ ಮಾತಾಡಿದ್ದ ರಮೇಶ್, ನಾನು ಗಂಡಸು, ಡಿಕೆಶಿ ಗಾಂ…. ಎಂದಿದ್ದರು. ತಮ್ಮ ಮಾತಿನವುದ್ದಕ್ಕೂ ಈ ಪದವನ್ನೇ ಪುನರುಚ್ಚರಿಸಿ ಡಿಕೆಶಿ ವಿರುದ್ಧ ಹರಿಹಾಯ್ದಿದ್ದರು. ಇದೀಗ ತಾವಾಡಿರುವ ಆ ಪದ ಬಳಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೂ ಅದನ್ನು ವಾಪಾಸ್ ಪಡೆಯುವುದಾಗಿ ರಮೇಶ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಯವರದು ಎನ್ನಲಾದ ವಿಡಿಯೋದಲ್ಲಿದ್ದಾಳೆ ಎನ್ನಲಾಗುತ್ತಿರುವ ಯುವತಿಯ ಪೋಷಕರು ಇಂದು ಎಸ್‍ಐಟಿ ಎದುರು ಹಾಜರಾದರು. ಬಳಿಕ ಮಾಧ್ಯಮಗಳ ಎದುರು ಮಾತಾಡಿದ ಯುವತಿಯ ಸಹೋದರ ‘ನಮ್ಮ ಅಕ್ಕನನ್ನು ಇಟ್ಟುಕೊಂಡು ಡಿ.ಕೆ. ಶಿವಕುಮಾರ್ ಹೊಲಸು ರಾಜಕಾರಣ ಮಾಡುತ್ತಿದ್ದಾರೆ’ ಎಂದು ನೇರವಾಗಿ ಆರೋಪಿಸಿದ್ದರು.

ಯುವತಿಯ ಕುಟುಂಬದವರು ಡಿಕೆಶಿ ಹೆಸರು ಹೊರ ಹಾಕುತ್ತಿದ್ದಂತೆ ಮಾಧ್ಯಮಗಳ ಎದುರು ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ, ಡಿಕೆಶಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಡಿಕೆಶಿ ರಾಜಕೀಯಕ್ಕೆ ನಾಲಾಯಕ್ ಎಂದು ಮೊದಲಿಸಿದರು. ಗಾಂ.. ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಚುನಾವಣೆಯಲ್ಲಿ ಡಿಕೆಶಿ ಸೋಲಿಸುವುದೇ ನನ್ನ ಗುರಿ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next