Advertisement

ರಮೇಶ್‌ ಮನವೊಲಿಸಲು ಪ್ರಯತ್ನಿಸುವೆ: ಉಗ್ರಪ್ಪ

10:03 AM Apr 26, 2019 | Lakshmi GovindaRaju |

ಬಳ್ಳಾರಿ: ಕಾಂಗ್ರೆಸ್‌ ಪಕ್ಷ ಸಮುದ್ರವಿದ್ದಂತೆ. “ಆಯಾರಾಮ್‌ ಗಯಾರಾಮ್‌’ ಎಂಬ ಮಾತಿನಂತೆ ಕಾಂಗ್ರೆಸ್‌ಗೆ ಬರೋರು ಬರುತ್ತಾರೆ. ಹೋಗೋರು ಹೋಗುತ್ತಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರೋಕ್ಷವಾಗಿ ರಮೇಶ್‌ ಜಾರಕಿಹೊಳಿಗೆ ಟಾಂಗ್‌ ನೀಡಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ಅವರೊಂದಿಗೆ ನಾನು ಸಹ ಹಲವಾರು ಬಾರಿ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದ್ದೇನೆ. ರಾಜಕೀಯವಾಗಿ ನಿಮಗೆ ಇನ್ನೂ ಭವಿಷ್ಯವಿದೆ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದೇನೆ. ಮತ್ತೂಮ್ಮೆ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next