Advertisement

ಸಚಿವ ರಮಾನಾಥ ರೈಗೆ ಗೃಹ ಖಾತೆ?

08:10 AM Jul 24, 2017 | Harsha Rao |

ಮಂಗಳೂರು: ಡಾ| ಜಿ. ಪರಮೇಶ್ವರ್‌ ಅವರಿಂದ ತೆರವಾಗಿರುವ ಗೃಹಸಚಿವ ಸ್ಥಾನವನ್ನು ಸಚಿವ ರಮಾನಾಥ ರೈ ಅವರಿಗೆ ನೀಡಲಾಗುತ್ತಿದೆ ಎಂಬುದಾಗಿ ಕಳೆದ ಹಲವು ದಿನಗಳಿಂದ ಕೇಳಿ ಬರು ತ್ತಿರುವ ವದಂತಿಗಳಿಗೆ ಪುಷ್ಟಿ ನೀಡುವಂತೆ ಕೆಲವು ದಿಢೀರ್‌ ಬೆಳವಣಿಗೆಗಳು ಶನಿವಾರ ನಡೆದಿವೆ. ತುರ್ತಾಗಿ ಬೆಂಗಳೂರಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿ. ರಮಾನಾಥ ರೈ ಅವರಿಗೆ ಬುಲಾವ್‌ ಬಂದಿದ್ದು ಈ ಹಿನ್ನೆಲಯಲ್ಲಿ ರವಿವಾರ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಸಂಜೆ 4 ಗಂಟೆಗೆ ವಿಮಾನದ ಮೂಲಕ ಅವರು ಬೆಂಗಳೂರಿಗೆ ತೆರಳಿದ್ದಾರೆ.

Advertisement

ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಇತ್ತೀಚಿನ ವಿದ್ಯಮಾನಗಳು, ಕೆಲವೇ ತಿಂಗಳುಗಳಲ್ಲಿ ನಡೆ ಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಯಲ್ಲಿ ರಮಾನಾಥ ರೈ ಅವರು ಗೃಹಸಚಿವ ಸ್ಥಾನ ವಹಿಸಿಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸಿಲ್ಲ. ಗೃಹ ಸಚಿ ವಾಲಯ ಮಹತ್ವದ ಇಲಾಖೆಯಾಗಿದ್ದು ವಿಶೇಷ ಗಮನ ನೀಡಬೇಕಾಗುತ್ತದೆ. ಇದರಿಂದ ತನ್ನ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ  ಗಮನ ಹರಿಸಿ ಕೆಲಸ ಮಾಡಲು ಸಾಧ್ಯವಾಗಲಾರದು ಎಂಬ ಅಂಶಗಳು ಅವರು ಆಸಕ್ತಿ ವಹಿಸದಿರಲು ಕಾರಣ ವಾಗಿವೆ ಎಂದು ಮೂಲಗಳು ತಿಳಿಸಿವೆ.

ಆರು ಬಾರಿ ಶಾಸಕರಾಗಿರುವ ಬಿ. ರಮಾನಾಥ ರೈ ಅವರು ಪ್ರಸ್ತುತ ಸಿದ್ದರಾಮಯ್ಯ ಅವರ ಮಂತ್ರಿ ಮಂಡಲ ದಲ್ಲಿ ಹಿರಿಯ ಸಚಿವರಲ್ಲಿ ಓರ್ವರಾಗಿದ್ದು ಹಲವು ಖಾತೆಗಳನ್ನು ನಿರ್ವಹಿಸಿರುವ ಅನುಭವ ಹೊಂದಿ ದ್ದಾರೆ. 1993-94ರಲ್ಲಿ ವೀರಪ್ಪ ಮೊಲಿ ಅವರ ಸಚಿವ ಸಂಪುಟದಲ್ಲಿ ಗೃಹ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ರಮಾನಾಥ ರೈ ಅವರ ಹೆಸರು ಗೃಹಸಚಿವ ಸ್ಥಾನಕ್ಕೆ ಮೊದಲ ಆದ್ಯತೆಯಾಗಿ ಪರಿಗಣಿಸಲ್ಪಟ್ಟಿದ್ದು ಪಕ್ಷದ ಹೈಕಮಾಂಡ್‌ ಕೂಡಾ ರಮಾನಾಥ ರೈ ಅವರ ಬಗ್ಗೆ ಒಲವು ವ್ಯಕ್ತ ಪಡಿಸಿದೆ ಎನ್ನಲಾಗಿದ್ದು ರಮಾನಾಥ ರೈ ಅವರಿಗೆ ಈಗ ಇರುವ ಖಾತೆಯ ಜತೆಗೆ ಗೃಹಖಾತೆಯ ಹೊಣೆಗಾರಿಕೆಯನ್ನು ವಹಿಸಿಕೊಡಲಾಗುತ್ತಿದೆ ಎಂಬ ಊಹಾಪೋಹಾ ಕಳೆದು ಕೆಲವು ದಿನಗಳಿಂದ ಕೇಳಿಬರತೊಡಗಿತ್ತು.  

ಶನಿವಾರ ರಮಾನಾಥ ರೈ ಅವರು ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಸಂಜೆಯ ವೇಳೆಗೆ ಮುಖ್ಯಮಂತ್ರಿಯವರು ದೂರ ವಾಣಿ ಕರೆ ಮಾಡಿ ಗೃಹಸಚಿವ ಸ್ಥಾನ ನೀಡುವ ಕುರಿತಂತೆ ಮಾಹಿತಿ ನೀಡಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ರಮಾನಾಥ ರೈ ಅವರನ್ನು ಶನಿವಾರ ರಾತ್ರಿ ಉದಯವಾಣಿ ಸಂಪರ್ಕಿಸಿದಾಗ “ಗೃಹಸಚಿವ ಸ್ಥಾನ ನೀಡುವ ಬಗ್ಗೆ ತನಗೆ ಮಾಹಿತಿ ಬಂದಿಲ್ಲ’ ಎಂದು ಉತ್ತರಿಸಿದ್ದರು. ರವಿವಾರ ಮುಖ್ಯಮಂತ್ರಿಯವರು ಮತ್ತೆ ಕರೆ ಮಾಡಿ ತುರ್ತಾಗಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ನಗರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಸಂಜೆ 4 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳಿದರು. 

ಆದರೆ ಸಿಎಂ ಸಿದ್ದರಾಮಯ್ಯ ಅವರ ಭೇಟಿ ಸಾಧ್ಯವಾಗದೆ ಸಚಿವ ರೈ ಅವರು ರವಿವಾರ ರಾತ್ರಿ ಬೆಂಗಳೂರಿನಿಂದ ವಾಪಸ್‌ ಹೊರಟಿರುವರು ಎಂದು ಮೂಲಗಳು ತಿಳಿಸಿವೆ.

Advertisement

ಮುಂದಿನ ಮಾತುಕತೆ ವೇಳೆ ಪಕ್ಷದ ಹೈಕಮಾಂಡ್‌ ಗೃಹಸಚಿವ ಸ್ಥಾನವನ್ನು ವಹಿಸಿಕೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರೆ ಆಗ ಅನಿವಾರ್ಯವಾಗಿ ರೈ ಒಪ್ಪಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

ಡಾ| ಜಿ. ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷ ರಾಗಿ ಪುನರಾಯ್ಕೆಗೊಂಡಿರುವ ಹಿನ್ನೆಲೆ ಯಲ್ಲಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕಳೆದ 2 ತಿಂಗಳುಗಳಿಂದ ಈ ಖಾತೆ ಮುಖ್ಯಮಂತ್ರಿ ಯವರ ಬಳಿಯೇ ಇದೆ. ಇನ್ನು ಕೆಲವೇ ತಿಂಗಳು ಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯ ಲಿದ್ದು ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹೆಚ್ಚಿನ ಗಮನಹರಿಸಬೇಕಾಗಿರುವ ಹಿನ್ನೆಲೆ ಯಲ್ಲಿ ಈ ಹೊಣೆಗಾರಿಕೆಯನ್ನು ಇನ್ನೊಬ್ಬ ರಿಗೆ ವಹಿಸಿಕೊಡಲು ಮುಖ್ಯಮಂತ್ರಿ ನಿರ್ಧ ರಿಸಿ ದ್ದಾರೆ. ಈ ಸ್ಥಾನಕ್ಕೆ ಬೆಂಗಳೂರು ನಗರಾಭಿ ವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಅರಣ್ಯಸಚಿವ ರಮಾನಾಥ ರೈ, ಲೋಕೋಪ ಯೋಗಿ ಸಚಿವ ಎಚ್‌.ಸಿ. ಮಹಾದೇವಪ್ಪ ಬಗ್ಗೆ ಸಿದ್ದರಾಮಯ್ಯ ಒಲವು ತೋರ್ಪಡಿಸಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next