Advertisement

Ramanagara: ಯೋಗೇಶ್ವರ್ ಬಾವನ ಕೊಲೆ ಪ್ರಕರಣ ಸಿಓಡಿಗೆ ಹಸ್ತಾಂತರ

12:01 PM Dec 28, 2023 | Team Udayavani |

ರಾಮನಗರ: ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಬಾವನ ಕೊಲೆ ಪ್ರಕರಣವನ್ನು  ಸಿಓಡಿಗೆ ಹಸ್ತಾಂತರ ಮಾಡಲಾಗಿದೆ. ಎಡಿಜಿಪಿ ಹಿತೇಂದ್ರ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಸಿಒಡಿ ಪೊಲೀಸರು ಚನ್ನಪಟ್ಟಣ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಆರೋಪಗಳನ್ನು ಹಾಜರುಪಡಿಸಿ ವಶಕ್ಕೆ ಪಡೆಯಲಿದ್ದಾರೆ.

ಇದನ್ನೂ ಓದಿ:Money Laundering Case: ಆರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರು ಉಲ್ಲೇಖ

ಸಿಓಡಿ ಡಿವೈಎಸ್ಪಿ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಚನ್ನಪಟ್ಟಣ ‌ನ್ಯಾಯಾಲಯಕ್ಕೆ ಸಿಒಡಿ ತಂಡ ಆಗಮಿಸಿದ್ದಾರೆ.  ಇಂದೇ ಆರೋಪಿಗಳ ಕಡತ ಸಿಇಡಿಗೆ ಹಸ್ತಾಂತರವಾಗಲಿದೆ.

Advertisement

ಚನ್ನಪಟ್ಟಣ ಗ್ರಾಮಾಂತರ ಪಿಎಸ್‌ಐ ಕೃಷ್ಣ ನೇತೃತ್ವದಲ್ಲಿ A1 ಮುರುಗೇಶ್ (42), A2 ಪ್ರಭಾಕರ್ (27), A3 ಮಧನ್ ಕುಮಾರ್ (33), A4 ರಾಧ (40) ಎಂಬುವವರನ್ನ ಬಂಧಿಸಲಾಗಿದೆ.

ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಮೂಲದ ನಾಲ್ವರು ಆರೋಪಿಗಳು ವಿಚಾರಣೆ ವೇಳೆ ಅನೈತಿಕ ಸಂಬಂಧದಿಂದಾಗಿ ಕೊಲೆ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next