Advertisement

Ramanagara: ಸಾವನದುರ್ಗ ಚಾರಣ ಏರಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ..!

06:00 PM Dec 30, 2023 | Team Udayavani |

ರಾಮನಗರ: ಕೆಲ ದಿನಗಳ ಹಿಂದೆ ಸಾವನದುರ್ಗ ಚಾರಣ ಏರಿ ನಾಪತ್ತೆಯಾಗಿದ್ದ ಯುವಕ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.

Advertisement

ಗಗನ್ ದೀಪ್ ಸಿಂಗ್ (30) ಮೃತ ಯುವಕ. ಉತ್ತರ ಪ್ರದೇಶದ ಮೂಲದ ಗಗನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಭಾನುವಾರ ಸ್ನೇಹಿತನ ಜೊತೆ ಸಾವನದುರ್ಗ ಚಾರಣಕ್ಕೆ        ಬಂದಿದ್ದ.

ಭಾನುವಾರ ಸಂಜೆ ಚಾರಣದಲ್ಲಿ ಸ್ನೇಹಿತನಿಂದ ದೂರವಾಗಿದ್ದ ಗಗನ್ ನಾಪತ್ತೆಯಾಗಿದ್ದ.  ಕಳೆದ ಐದು ದಿನಗಳಿಂದ ಗಗನ್ ಗಾಗಿ ಹುಡುಕಾಟ‌ ನಡೆಸಲಾಗುತ್ತಿತ್ತು. ಅರಣ್ಯಾಧಿಕಾರಿಗಳು, ಪೊಲೀಸರು, ಸ್ಥಳೀಯರು ಸೇರಿ ಬೆಟ್ಟದಲ್ಲಿ ಹುಡುಕುತ್ತಿದ್ದರು. ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಗಗನ್ ಶವ ಪತ್ತೆಯಾಗಿದೆ. ಸಾವನದುರ್ಗ ಬೆಟ್ಟದ ಎಮ್ಮೆಬೀಡು ಪ್ರದೇಶದಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ:Arrested: ಕ್ಯಾಬ್‌ ಚಾಲಕನಿಗೆ ಇರಿದು ದೋಚಿ ಪರಾರಿ ಆಗುತ್ತಿದ್ದ ಪ್ರಯಾಣಿಕ ಸೆರೆ

ಕೊಳೆತ ವಾಸನೆ ಜಾಡು ಹಿಡಿದು ಪೊಲೀಸರು, ಸ್ವಯಂ ಸೇವಕರ ತಂಡ ಶವ ಪತ್ತೆ ಹಚ್ಚಿದೆ. ಗಗನ್ ಶವ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

ಸ್ಥಳಕ್ಕೆ ಮಾಗಡಿ ಸಿಪಿಐ ಗಿರಿರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next