Advertisement

Ramanagar; ಟೈರ್ ಸ್ಪೋಟಗೊಂಡು ಬೃಹತ್ ಕಂಟೇನರ್ ಪಲ್ಟಿ; ಅಡಿಯಲ್ಲಿ ಸಿಲುಕಿ ಚಾಲಕ ನರಳಾಟ

10:10 AM Sep 15, 2023 | Team Udayavani |

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಬೆಳ್ಳಂಬೆಳಿಗ್ಗೆ ಅಪಘಾತ ನಡೆದಿದ್ದು, ಟೈರ್ ಸ್ಪೋಟಗೊಂಡು ಬೃಹತ್ ಕಂಟೈನರ್ ಪಲ್ಟಿಯಾಗಿದೆ.

Advertisement

ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಮೈಸೂರಿಗೆ ಸಿಮೆಂಟ್ ಲೋಡ್ ತುಂಬಿಕೊಂಡು ಹೋಗುತ್ತಿದ್ದ ಕಂಟೈನರ್ ಟೈರ್ ಸ್ಪೋಟವಾದ ಪರಿಣಾಮ ಹೈವೆಯಿಂದ ಸರ್ವೀಸ್ ರಸ್ತೆಗೆ ಉರುಳಿದೆ.

ಇದನ್ನೂ ಓದಿ:Sandalwood; ರಿಲೀಸ್‌ ಅಖಾಡದಲ್ಲಿ ಭಿನ್ನ ವಿಭಿನ್ನ ಚಿತ್ರಗಳು…: 4 ಚಿತ್ರಗಳು ಇಂದು ತೆರೆಗೆ

ಅಪಘಾತದ ರಭಸಕ್ಕೆ ಲಾರಿ ಇಂಜಿನ್ ಮತ್ತು ಕಂಟೇನರ್ ಇಬ್ಬಾಗವಾಗಿದೆ. ಚಾಲಕ ಕಂಟೇನರ್ ಅಡಿಯಲ್ಲಿ ಸಿಲುಕಿ ನರಳಾಟ ನಡೆಸುತ್ತಿದ್ದು, ಸ್ಥಳೀಯರು, ಪೊಲೀಸರಿಂದ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next