ರಾಮದುರ್ಗ : ಬಸವೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಶಾಖೆಯಲ್ಲಿ ಕಳ್ಳತನ ಮಾಡಿ 8,31,525 ರೂಪಾಯಿ ಖದೀಮರು ದೋಚಿ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮನಿಹಾಳ-ಸುರೇಬಾನ ಗ್ರಾಮದಲ್ಲಿ ನಡೆದಿದೆ
ಮನಿಹಾಳ-ಸುರೇಬಾನದ ಶ್ರೀ ಬಸವೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಶಾಖೆಯಲ್ಲಿ ಸಿಬ್ಬಂದಿಗಳು ಎಂದಿನಂತೆ ತಮ್ಮ ಕಾರ್ಯವನ್ನು ಮುಗಿಸಿಕೊಂಡು ಮನೆಗೆ ತೆರಳಿದ್ದಾರೆ ಬುಧವಾರ ತಡರಾತ್ರಿಯಲ್ಲಿ ಖದೀಮ ಕಟ್ಟಿಗೆ ಬಾಗಿಲನ್ನು ಕಬ್ಬಿಣದ ರಾಡ್ ಬಳಿಸಿಕೊಂಡು ಕೀ ಮುರಿದು ಒಳಗೆ ನುಗ್ಗಿ ಅಲ್ಲಿರುವ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ
ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸ್ ಠಾಣೆಯ ಸಿಬಿಐ ಆಯ್.ಆರ್. ಪಟ್ಟಣಶೆಟ್ಟಿ ಹಾಗೂ ಪಿಎಸ್ಐ ಶಿವಾನಂದ ಕಾರಜೋಳ ಭೇಟಿ ನೀಡಿ ಕಳ್ಳತನ ನಡೆದಿರುವ ಘಟನೆ ಕುರಿತು ಪರಿಶೀಲನೆ ನಡೆಸಿ ಖದೀಮರ ಶೋಧಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ
ಖದೀಮ ಬಾಗಿಲು ಮುರಿದು ಒಳನುಗ್ಗಿ ಹಣ ದೋಚಿರುವ ದೃಶ್ಯ ಶಾಖೆಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ ಇಷ್ಟೆಲ್ಲ ವ್ಯವಹಾರಗಳು ನಡೆಯುತ್ತಿದ್ದರು ಶಾಖೆಯಲ್ಲಿ ಲಾಕರ್ ವ್ಯವಸ್ಥೆ ಇಲ್ಲದೆ ಇಷ್ಟೊಂದು ಹಣ ಇಟ್ಟಿರುವ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆಹಾಕುವಲ್ಲಿ ಮುಂದಾಗಿದ್ದಾರೆ
ಇದನ್ನೂ ಓದಿ : ನರೇಗಾ ಅನುಷ್ಠಾನ : ಚಿಕ್ಕಬಳ್ಳಾಪುರ ಜಿಲ್ಲಾ ಪಂ. ಉಪ ಕಾರ್ಯದರ್ಶಿಗೆ ರಾಜ್ಯ ಮಟ್ಟದ ಪ್ರಶಸ್ತಿ