Advertisement

ಸ್ಯಾಂಡಲ್‌ವುಡ್‌ಗೆ ಮತ್ತೂಬ್ಬ ರಾಮಾಚಾರಿ

02:04 PM Nov 27, 2020 | Suhan S |

ಸ್ಯಾಂಡಲ್‌ವುಡ್‌ನ‌ಲ್ಲಿ “ರಾಮಾಚಾರಿ’, “ಮಿಸ್ಟರ್‌ ಆ್ಯಂಡ್‌ ಮಿಸಸ್‌ ರಾಮಾಚಾರಿ’ ಸಿನಿಮಾಗಳು ಜನಮನ ಗೆದ್ದಿರುವುದು ಗೊತ್ತೇ ಇದೆ. ಸದ್ಯ ರಾಮಾಚಾರಿ ನಂಟು ಚಿತ್ರರಂಗದಲ್ಲಿ ಮತ್ತೆ ಮುಂದುವರೆಯುತ್ತಿದ್ದು, ಈಗ ಅಂಥದ್ದೇ ಮತೊಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಹೊರಟಿದ್ದಾರೆ ಯುವ ನಟ ತೇಜ್‌. ಅಂದಹಾಗೆ, ಆ ಚಿತ್ರದ ಹೆಸರು “ರಾಮಾಚಾರಿ 2.0′

Advertisement

ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮುಹೂರ್ತವನ್ನು ನೆರವೇರಿಸಿ “ರಾಮಾಚಾರಿ 2.0′ ಚಿತ್ರದ ಚಿತ್ರೀಕರಣ ಕಾರ್ಯಕ್ಕೆ ಚಾಲನೆ ನೀಡಿದೆ.ಕನ್ನಡ ಚಿತ್ರರಂಗದ ನಿರ್ದೇಶಕರಾದ ಶಶಾಂಕ್‌, ಪ್ರವೀಣ್‌ ನಾಯಕ್‌, ಫೈವ್‌ ಸ್ಟಾರ್‌ ಗಣೇಶ್‌ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

“ಪನಾರೋಮಿಕ್‌ ಸ್ಟುಡಿಯೋ’ದ ಸಹಯೋಗದಲ್ಲಿ “ಮೇಘನಾಕ್ರಿಯೇಷನ್ಸ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ರಾಮಾಚಾರಿ 2.0′ ಚಿತ್ರದಲ್ಲಿ ತೇಜ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಜೊತೆಗೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಇದೇ ವೇಳೆ ಚಿತ್ರದ ಪಾತ್ರ ಮತ್ತು ಕಥಾಹಂದರದ ಬಗ್ಗೆ ಮಾತನಾಡಿದ ನಾಯಕ ‌ಕಂ ನಿರ್ದೇಶಕ ತೇಜ್‌, “ಈಗಾಗಲೇ ಪುಟ್ಟಣ್ಣ ಕಣಗಾಲ್‌ ಅವರ “ನಾಗರಹಾವಿ’ನ ರಾಮಾಚಾರಿಯಿಂದ ಹಿಡಿದು, ರವಿಚಂದ್ರನ್‌ ಅವರ “ರಾಮಾಚಾರಿ’, ಇತ್ತೀಚಿಗಿನ ಯಶ್‌ ಅವರ “ಮಿಸ್ಟರ್‌ ಆ್ಯಂಡ್‌ ಮಿಸಸ್‌ ರಾಮಾಚಾರಿ’ ಎಲ್ಲವೂ ಹೊಸ ದಾಖಲೆ ಬರೆದ ಸಿನಿಮಾಗಳೇ. ನಮ್ಮ ಸಿನಿಮಾದ ಸಬೆjಕ್ಟ್ ಮತ್ತು ಕಾನ್ಸೆಪ್ಟ್ ಎರಡಕ್ಕೂ ಈ ಟೈಟಲ್‌ ಹೊಂದಾಣಿಕೆಯಾಗುತ್ತಿರುವುದರಿಂದ, ಅದೇ ರಾಮಾಚಾರಿ ಟೈಟಲ್‌ ಅನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಇದು ಬಟರ್‌ ಫ್ಲೈ ಕಾನ್ಸೆಪ್ಟ್ ಮೇಲೆ ಮಾಡಲಾಗುತ್ತಿರುವ ಸಿನಿಮಾ. ಈ ರಾಮಾಚಾರಿ ತುಂಬ ಬುದ್ಧಿವಂತ. ಸಿನಿಮಾದಲ್ಲಿ ವಿಧಿಯೇ ಅವನಿಗೆ ದೊಡ್ಡ ವಿಲನ್‌. ಅದನ್ನ ಹೀರೋ ರಾಮಾಚಾರಿ ಹೇಗೆ ಹ್ಯಾಂಡಲ್‌ ಮಾಡುತ್ತಾನೆ ಅನ್ನೋದೆಕಥೆ’ ಎಂದರು.

ಇನ್ನು ಈ “ರಾಮಾಚಾರಿ 2.0′ ಚಿತ್ರದಲ್ಲಿ ಮಾರ್ಗರೇಟ್‌ ಪಾತ್ರದಲ್ಲಿ ಮಂಗಳೂರು ಮೂಲದ ಹುಡುಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ವಿಜಯ್‌ ಚೆಂಡೂರ್‌, ಸಂದೀಪ್‌ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ,ಕೃಷ್ಣಮೂರ್ತಿ ಕವತಾರ್‌, ಅಶ್ವಿ‌ನ್‌ ಹಾಸನ್‌ ಮೊದಲಾದವರು ಚಿತ್ರದ ತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರೇಮ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಸುಂದರ್‌ ಮೂರ್ತಿ ಸಂಗೀತ ಸಂಯೋಜನೆಯಿದ್ದು, ರಾಜೇಶ್‌ಕೃಷ್ಣನ್‌, ಸಂತೋಷ್‌, ಐಶ್ವರ್ಯಾ ರಂಗರಾಜನ್‌ ಹಾಡುಗಳಿಗೆ ಧ್ವನಿಯಾಗುತ್ತಿದ್ದಾರೆ. ಸದ್ಯ ಮುಹೂರ್ತವನ್ನು ನೆರವೇರಿಸಿಕೊಂಡ “ರಾಮಾಚಾರಿ 2.0′ ಚಿತ್ರತಂಡ, ಇದೇ ಡಿಸೆಂಬರ್‌ ಅಂತ್ಯ ಅಥವಾ ಜನವರಿಯಲ್ಲಿ ಶೂಟಿಂಗ್‌ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next