Advertisement

Ram;ಮಂಗಳಾರತಿಯಲ್ಲಿ ಧನುರ್ಬಾಣ ಸಹಿತವಾಗಿ ಮಿಂಚಿದ ರಾಮ!: ಭಕ್ತರೆಲ್ಲ ಚಕಿತ

09:45 PM Jan 23, 2024 | Team Udayavani |

ಬೆಳಗಾವಿ: ಇಲ್ಲಿಯ ಮಾಳಮಾರುತಿ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ1008 ದೀಪಗಳ ಮಂಗಳಾರತಿ ಸಮಯದಲ್ಲಿ ಕಂಡು ಬಂದ ಶ್ರೀ ರಾಮಚಂದ್ರ ದೇವರು ಧನುರ್ಬಾಣ ಸಹಿತವಾಗಿ ಮಿಂಚಿದ ಅದ್ಭುತವಾದ ದೃಶ್ಯ ಅಲ್ಲಿ ಸೇರಿದ್ದ ಭಕ್ತರೆಲ್ಲರನ್ನು ಚಕಿತಗೊಳಿಸಿತು.

Advertisement

ಸಂಜೆ 6 ಗಂಟೆಯಿಂದ ರಾತ್ರಿ 9.30 ಗಂಟೆಯವರೆಗೆ ಶ್ರೀಮಠದಲ್ಲಿ ದೀಪೋತ್ಸವ ಕಾರ್ಯಕ್ರಮ ನೆರವೇರಿತು. ಪಂ.ಸಮೀರಾಚಾರ್ಯ ಅವರು ಮಂಗಳಾರತಿ ಮಾಡುವ ಸಮಯದಲ್ಲಿ ಈ ಅಪೂರ್ವ ಚಿತ್ರದ ಸಂದರ್ಭ ಕಂಡುಬಂದಿತು. ಮಂಗಳಾರತಿಯಲ್ಲಿ ಶ್ರೀ ರಾಮಚಂದ್ರ ದೇವರ ದಿವ್ಯದರ್ಶನವಾಯಿತು.

ಇದಕ್ಕೆ ಮುನ್ನ ಬಾಲರಾಮನ ಪ್ರತಿಷ್ಠಾಪನ ಪ್ರಯುಕ್ತ, ಬೆಳಗ್ಗೆಯಿಂದ ಪ್ರಾರಂಭವಾದ ಸುಂದರಕಾಂಡ ಪಾರಾಯಣ ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ, ಪೂಜೆ ಅಲಂಕಾರ ಶ್ರೀ ಆಂಜನೇಯ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಾಮನಾಮ ಜಪ, ತೀರ್ಥ ಪ್ರಸಾದ ಕಾರ್ಯಕ್ರಮ ನಡೆದವು.

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಮಾಲಿಹಳ್ಳಿ, ಹನುಮಂತರಾವ ದಾತಾರ, ವಿನಾಯಕ ಕುಲಕರ್ಣಿ, ಸಮಿರಣ ಕಟ್ಟಿ ಕೊರ್ಲಹಳ್ಳಿ, ಬಾಡಗಂಡಿ ಅವರು ಉಪಸ್ಥಿತರಿದ್ದರು.

Advertisement

ಶ್ರೀಮಠವನ್ನು ವಿದ್ದುದ್ದೀಪಗಳಿಂದ ಅಲಂಕರಿಸಿ, ಇಡೀ ಪ್ರಾಂಗಣವನ್ನು 200 ಕ್ಕೂ ಹೆಚ್ಚು ಪ್ರಣತೆ ದೀಪಗಳಿಂದ ಮುಖ್ಯವಾಗಿ ಶ್ರೀ ರಾಮಚಂದ್ರ ದೇವರ ರಂಗೋಲಿಯಲ್ಲಿ ಬೆಳಗಿಸಿ ದೀಪಾವಳಿಯ ಹರ್ಷವನ್ನು ನೂರಾರು ಭಕ್ತರ ಮಧ್ಯೆ ಜೈ ಶ್ರೀರಾಮ ಜಯಘೋಷಗಳೊಂದಿಗೆ ಹಾಗೂ ಪುಟ್ಟ ಪುಟ್ಟ ಬಾಲಕರ ರಾಮಚಂದ್ರ ಲಕ್ಷ್ಮಣ ವೇಷ, 5 ವರ್ಷದ ಬಾಲಕ ಸನ್ಮೋದನಿಂದ ರಾಮಾಯಣ ಕಥಾ ನಿರೂಪಣೆ, ಪಲ್ಲಕ್ಕಿಯಲ್ಲಿ ಶ್ರೀರಾಮಚಂದ್ರ, ಹನುಮಂತರ ಪ್ರದಕ್ಷಣೆ ಕಾರ್ಯಕ್ರಮಗಳು ವೈಭವದಿಂದ ಸಂಪನ್ನವಾದವು.

Advertisement

Udayavani is now on Telegram. Click here to join our channel and stay updated with the latest news.

Next