Advertisement

ಬಾಲಕನ ಆಸೆ ಪೂರೈಸಿದ ಟಾಲಿವುಡ್‌ ನಟ ರಾಮ್‌ ಚರಣ್‌

09:08 PM Feb 10, 2023 | Team Udayavani |

ಹೈದರಾಬಾದ್‌: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ 9 ವರ್ಷದ ಮಣಿಕೌಶಲ್‌ ಎಂಬ ಬಾಲಕನ ಇಚ್ಛೆಯನ್ನು ಟಾಲಿವುಡ್‌ ನಟ ರಾಮ್‌ಚರಣ್‌ ತೇಜ ಪೂರೈಸಿದ್ದಾರೆ.

Advertisement

ಜನಪ್ರಿಯ ನಟನನ್ನು ನೋಡಿ, ಭೇಟಿಯಾಗಬೇಕು ಎಂದು ಆತ ಇಚ್ಛಿಸಿದ್ದ. ಈ ಹಿನ್ನೆಲೆಯಲ್ಲಿ ಎನ್‌ಜಿಒ ಚರಣ್‌ ಅವರನ್ನು ಸಂಪರ್ಕಿಸಿ, ಬಾಲಕನ ಇಚ್ಛೆಯನ್ನು ವಿವರಿಸಿತು. ಅದಕ್ಕೆ ಸ್ಪಂದಿಸಿದ ರಾಮ್‌ಚರಣ್‌ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನನ್ನು ಮಾತನಾಡಿಸಿದ್ದಾರೆ. ಮಾತ್ರವಲ್ಲ ಬಾಲಕನ ಅಪ್ಪಅಮ್ಮನೊಂದಿಗೂ ಮಾತನಾಡಿ ಸಮಾಧಾನ ಪಡಿಸಿದ್ದಾರೆ.

ತಾವೇ ಬರೆದ ಪುಟ್ಟ ನೋಟೊಂದನ್ನು ಕಾಣಿಕೆಯಾಗಿ ನೀಡಿದ್ದಾರೆ. ಜಾಲತಾಣಗಳಲ್ಲಿ ಅವರ ನಿಲುವಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next