Advertisement

LDF ಸರಕಾರದ ಧೋರಣೆ ಖಂಡಿಸಿ ಬಿಜೆಪಿಯಿಂದ ಕೇರಳದಲ್ಲಿ ರ‍್ಯಾಲಿ

11:27 PM Nov 13, 2023 | Team Udayavani |

ಕೊಚ್ಚಿ: ಎಲ್‌ಡಿಎಫ್ ಸರಕಾರದ ಕೋಮುವಾದಿ ಮತ್ತು ಭಯೋತ್ಪಾದನ ಬೆಂಬಲಿತ ನಿಲುವುಗಳನ್ನು ಖಂಡಿಸಿ ಕೇರಳದಲ್ಲಿ ರ‍್ಯಾಲಿಗಳನ್ನು ಆಯೋಜಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ನಿರ್ಧರಿಸಿದೆ. ತೃಶ್ಶೂರ್‌, ಕಲ್ಲಿಕೋಟೆ, ಎರ್ನಾಕುಳಂ ನಲ್ಲಿ ಮೊದಲ ಹಂತದಲ್ಲಿ ಪ್ರತಿಭಟನೆ ನಡೆಯಲಿದ್ದರೆ, ಪತನಂತಿಟ್ಟದಲ್ಲಿ ಮುಂದಿನ 2 ವಾರಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ರಾಜ್ಯ ಬಿಜೆಪಿ ಘಟಕದ ವಕ್ತಾರರು ತಿಳಿಸಿದ್ದಾರೆ.

Advertisement

ಸಿಪಿಎಂ, ಕಾಂಗ್ರೆಸ್‌, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಪ್ಯಾಲೆಸ್ತೀನ್‌ ಪರವಾಗಿ ಕೇರಳಾದ್ಯಂತ ಮೆರವಣಿಗೆ, ಕಾರ್ಯಕ್ರಮಗಳನ್ನು ನಡೆ ಸುತ್ತಿರುವಂತೆಯೇ ಎನ್‌ಡಿಎ ಈ ನಿರ್ಧಾರ ಕೈಗೊಂಡಿದೆ. ಎಲ್‌ಡಿಎಫ್ ಸರಕಾರದ ಭಯೋತ್ಪಾದಾನೆಗೆ ಬೆಂಬಲ ನೀಡುವ, ತುಷ್ಟೀಕರಣ ನೀತಿಯನ್ನು ವಿರೋಧಿಸುವುದು ಮೂಲ ಉದ್ದೇಶ. ಪಕ್ಷದ ಕೇಂದ್ರ ನಾಯಕರೂ ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next