Advertisement

ಚಾರ್ಲಿಗೆ ಸಂಗೀತಾ; ಮಹದೇವನ ಸತಿ ಈಗ ರಕ್ಷಿತ್ ಗೆ ನಾಯಕಿ

06:08 PM Jul 17, 2018 | Team Udayavani |

ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “777ಚಾರ್ಲಿ’ ಚಿತ್ರದ ಒಂದು ಹಂತದ ಚಿತ್ರೀಕರಣ ಈಗಾಗಲೇ ಮುಗಿದು ಹೋಗಿದೆ. ಸದ್ಯ ರಕ್ಷಿತ್‌ “ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಈ ಗ್ಯಾಪಲ್ಲಿ ಚಿತ್ರತಂಡ ಚಾರ್ಲಿಗೆ ನಾಯಕಿ ಹುಡುಕಿದೆ. “ಚಾರ್ಲಿ’ಗೆ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಅನೇಕರಲ್ಲಿತ್ತು. ಈಗ ಸಂಗೀತಾಗೆ ನಾಯಕಿ ಪಟ್ಟ ಸಿಕ್ಕಿದೆ. ಈ ಮೂಲಕ ನಾಯಕಿಯ ಕುತೂಹಲಕ್ಕೆ ತೆರೆಬಿದ್ದಿದೆ. ನೀವು “ಹರ ಹರ ಮಹಾದೇವ’ ಧಾರಾವಾಹಿ ನೋಡಿದ್ದರೆ ನಿಮಗೆ ಸಂಗೀತಾ ಮುಖಪರಿಚಯವಿರುತ್ತದೆ. ಆ ಧಾರಾವಾಹಿಯಲ್ಲಿ ಸತಿ ಪಾತ್ರ ಮಾಡಿದ್ದ ಸಂಗೀತಾಗೆ ಈಗ ಪ್ರಮುಖ ಬ್ಯಾನರ್‌ನ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. 

Advertisement

ಮಾಡೆಲಿಂಗ್‌ ಮಾಡುತ್ತಿದ್ದ ಸಂಗೀತಾ “ಕರ್ಮ’ ಎಂಬ ಕಿರುಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದವರು. ಆ ನಂತರ ಸಂಗೀತಾಗೆ ಬ್ರೇಕ್‌ ನೀಡಿದ್ದು “ಹರ ಹರ ಮಹಾದೇವ’ ಧಾರಾವಾಹಿ. ಆ ಧಾರಾವಾಹಿ ಸಂಗೀತಾಗೆ ಒಳ್ಳೆಯ ಹೆಸರು ಕೊಟ್ಟಿದ್ದು ಸುಳ್ಳಲ್ಲ. ಹೀಗಿರುವಾಗ ಸಂಗೀತಾ ಹೊಸಬರ ಸಿನಿಮಾವೊಂದರಿಂದ ಅವಕಾಶ ಬಂದು, ಆ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ “777 ಚಾರ್ಲಿ’ಯಿಂದ ಅವಕಾಶ ಸಿಕ್ಕಿದೆ. ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಂಗೀತಾ, “ತುಂಬಾ ಚೆನ್ನಾಗಿದೆ. ಸವಾಲಿನ ಪಾತ್ರ’ ಎಂದಷ್ಟೇ ಹೇಳುತ್ತಾರೆ. 

ಈ ಚಿತ್ರವನ್ನು ಕಿರಣ್‌ ರಾಜ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರ ಮಾಡುತ್ತಿದ್ದು, ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಬಂಧದ ಸುತ್ತ ಈ ಸಿನಿಮಾ ಸಾಗಲಿದೆ. ನಾಯಕ ಹಾಗೂ ನಾಯಿ ನಡುವಿನ ಬಾಂಧವ್ಯ ಹೇಗಿರುತ್ತದೆ. ನಾಯಕನ ಜೀವನದಲ್ಲಿ ಆ ನಾಯಕಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಚಿತ್ರವನ್ನು ಜಿ.ಎಸ್‌.ಗುಪ್ತಾ ಹಾಗೂ ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿದ್ದು, ಪುಷ್ಕರ್‌ ಸಾಥ್‌ ನೀಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next