Advertisement

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

01:24 AM May 02, 2024 | Team Udayavani |

ಸಿದ್ದಾಪುರ: ಪುಣೆಯಿಂದ ಕುಂದಾಪುರಕ್ಕೆಖಾಸಗಿ ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದ ಉಳ್ಳೂರು-74 ಗ್ರಾಮದ ನೂಜಿನಬೈಲು ನಿವಾಸಿ, ಉದ್ಯಮಿ ಹಾಗೂ ಸಮಾಜ ಸೇವಕ ಪ್ರಶಾಂತ ಶೆಟ್ಟಿ (50) ನೂಜಿನಬೈಲು ಅವರು ಮಾರ್ಗಮಧ್ಯೆ ಮೇ 1ರ ಬೆಳಗಿನ ಸಮಯದಲ್ಲಿ ಹೊನ್ನಾವರದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದರು.

Advertisement

ಹೊನ್ನಾವರದ ಹತ್ತಿರ ಬರುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡಿ ದ್ದು, ಬಸ್‌ ನಿರ್ವಾಹಕರಿಗೆ ಮಾಹಿತಿ ನೀಡಿದ್ದರು. ನಿರ್ವಾಹಕ ಕೂಡಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಪುಣೆಯಲ್ಲಿ ಹಲವು ವರ್ಷಗಳ ಕಾಲ ಹೊಟೇಲ್‌ ಉದ್ಯಮ ನಡೆಸಿದ್ದ ಅವರು ಅನಂತರ ಬಾಬಾಸ್‌ ಕಿಚನ್‌ ಎನ್ನುವ ಉದ್ಯಮ ನಡೆಸಿಕೊಂಡು ಬರುತ್ತಿದ್ದರು. ಕೋವಿಡ್‌ ಸಂದರ್ಭ ಸಿದ್ದಾಪುರದಲ್ಲಿ ಶ್ಯಾಮಲಾ ಪ್ಯಾಲೇಸ್‌ ಎನ್ನುವ ಮದುವೆ ಹಾಲ್‌ ಮತ್ತು ಪ್ರಶ್ವಿ‌ನ್‌ ಇನ್‌ ಎನ್ನುವ ಲಾಡ್ಜ್ ಆರಂಭಿಸಿದ್ದರು. ಪುಣೆ ಹಾಗೂ ಮುಂಬಯಿ ಬಂಟ್ಸ್‌ ಸಂಘದ ಪದಾಧಿಕಾರಿಯಾಗಿ, ಕುಂದಾಪುರ ಯುವ ಬಂಟ್ಸ್‌ ಸಂಘ ಹಾಗೂ ಸಿದ್ದಾಪುರ ಯಕ್ಷ ನುಡಿಸಿರಿ ಬಳಗದ ಮಹಾ ಪೋಷಕರಾಗಿ ಸೇವೆ ಸೇವೆ ಸಲ್ಲಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next