Advertisement

ರಕ್ಷಾ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೊಂಬತ್ತಿ ಪ್ರತಿಭಟನೆ

10:55 PM Aug 31, 2020 | Hari Prasad |

ಕಾಪು: ಕಾಪುವಿನ ಗೃಹಿಣಿ ರಕ್ಷಾ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಕುರಿತಾಗಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೊಂಬತ್ತಿ ಪ್ರತಿಭಟನೆ ಇಂದು ನಡೆಯಿತು.

Advertisement

ತುಳುನಾಡ ಹಿಂದೂ ಸೇನೆಯ ಆಶ್ರಯದಲ್ಲಿ ಕಾಪು ಪೇಟಯಲ್ಲಿ ಸೋಮವಾರ ಸಾಯಂಕಾಲ ಈ ಪ್ರತಿಭಟನಾ ಸಭೆ ನಡೆಯಿತು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಎಸ್.ಸಿ.ಡಿ..ಸಿ.ಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ ಶೆಟ್ಟಿ, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ತುಳುನಾಡ ಹಿಂದೂ ಸೇನೆಯ ಅಧ್ಯಕ್ಷ ನಿತಿನ್ ಕಾಪು, ಕಾರ್ಯದರ್ಶಿ ಯಾದವ ಪೂಜಾರಿ, ಚಿತ್ತನ್ ಮೂಳೂರು, ಶಿವಪ್ರಸಾದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಕ್ಷಾ ಅವರ ಸಾವಿನ ತನಿಖೆಯು ಉನ್ನತ ಮಟ್ಟದಲ್ಲಿ ಆಗಲಿ ಎಂಬ ಆಗ್ರಹದೊಂದಿಗೆ ಮೊಂಬತ್ತಿ ಉರಿಸಿ, ಪ್ರಾರ್ಥನೆ ನಡೆಸಿದ ಪ್ರತಿಭಟನಾಕಾರರು ಈ ಗೃಹಿಣಿಯ ಸಾವಿಗೆ ನ್ಯಾಯ ಸಿಗುವಂತೆ ಮತ್ತು ಅವರ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next