Advertisement

ಅಸ್ತಾನಾ ಈಗ ವಾಯುಯಾನ ಭದ್ರತಾ ದಳದ ಮಹಾ ನಿರ್ದೇಶಕ

01:20 PM Jan 18, 2019 | udayavani editorial |

ಹೊಸದಿಲ್ಲಿ : ಭ್ರಷ್ಟಾಚಾರ ಕಳಂಕಿತ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರ ಹುದ್ದೆಯ ಅವಧಿಯನ್ನು ಕೇಂದ್ರ ಸರಕಾರ ಮೊಟಕು ಗೊಳಿಸಿದ ಒಂದು ದಿನದ ತರುವಾಯ, ಅಸ್ತಾನಾ ಅವರನ್ನು ನಾಗರಿಕ ವಾಯು ಯಾನ ಭದ್ರತಾ ದಳದ (BCAS) ಹೊಸ ಮಹಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

Advertisement

ರಾಕೇಶ್‌ ಅಸ್ತಾನಾ ಅವರು ಪದಚ್ಯುತ ಸಿಬಿಐ ಮುಖ್ಯಸ್ಥ ಆಲೋಕ್‌ ವರ್ಮಾ ಅವರೊಂದಿಗೆ ತೀವ್ರವಾದ ಜಟಾಪಟಿ ನಡೆಸಿದ್ದರು.

ನಾಗರಿಕ ವಾಯು ಯಾನ ಧ್ರತಾ ದಳದ ನಿರ್ದೇಶಕರ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಮಹಾ ನಿದೇಶಕರ ಹುದ್ದೆ ರಚಿಸಲಾಗಿದ್ದು ಅಸ್ತಾನಾ ಅವರಿಗೆ ಈಗ ಹೊಸ ಹುದ್ದೆ ನೀಡಲಾಗಿದೆ ಎಂದು ಸಂಪುಟ ನೇಮಕಾತಿ ಸಮಿತಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next