Advertisement

ರಾಜ್ಯಸಭೆ ಚುನಾವಣೆ: ಲೆಹರ್‌ ಸಿಂಗ್‌ ಗೆಲ್ಲಿಸಲು ಕಸರತ್ತು ನಡೆಸಿದ್ದೇವೆ: ಆರ್‌.ಅಶೋಕ್‌

10:49 PM May 31, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಅವರನ್ನು ಗೆಲ್ಲಿಸಿಕೊಂಡು ಬರಲು ಕಸರತ್ತು ನಡೆಸಿದ್ದೇವೆ. ನಮಗೆ 2ನೇ ಪ್ರಾಶಸ್ತ್ಯದ ಮತಗಳು ಹೆಚ್ಚಾಗಿವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 4ನೇ ಸೀಟು ಯಾರಾದರೂ ಗೆಲ್ಲಲೇಬೇಕಲ್ಲವೆ. ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಯೋಚನೆ ಮಾಡಿ ಅಭ್ಯರ್ಥಿ ಹಾಕಿದ್ದಾರೆ. ಲೆಹರ್‌ ಸಿಂಗ್‌ ಗೆಲ್ಲಲು ಬೇಕಾದ ಕಸರತ್ತು ಮಾಡುತ್ತೇವೆ.

ನಮಲ್ಲಿ 2ನೇ ಪ್ರಾಶಸ್ತ್ಯದ ಮತ ಹೆಚ್ಚಾಗಿವೆ. ಜೆಡಿಎಸ್‌ ಯಾರಿಗೆ ಬೆಂಬಲ ಸೂಚಿಸುತ್ತಾರೆ ಅನ್ನೋದನ್ನ ನೋಡಬೇಕು.

ಈಗಾಗಲೇ ಜೆಡಿಎಸ್‌ ಅಭ್ಯರ್ಥಿ ಕಾಂಗ್ರೆಸ್‌ ನಾಯಕರ ಮನೆ ಬಾಗಿಲು ತಟ್ಟಿದ್ದಾರೆ. ಈ ಹಿಂದೆ ಕೂಡ ಅಧಿಕಾರ ಕೊಟ್ಟು ಕೆಳಗಿಸಿದ್ದಾರೆ ಎನ್ನುವುದು ದೇವೆಗೌಡರಿಗೆ ಗೊತ್ತಿದೆ.

ನಾನು ಈ ಬಗ್ಗೆ ಅರುಣ್‌ ಸಿಂಗ್‌ ಬಳಿ ಕೂಡ ಮಾತನಾಡಿದ್ದೇನೆ. ಗೆಲ್ಲಲು ಏನು ಕಾರ್ಯತಂತ್ರ ಮಾಡಬೇಕು ಅದನ್ನು ನಾವು ಮಾಡುತ್ತಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next