Advertisement

ನಾಮಪತ್ರ ಸಲ್ಲಿಸಿದ ಹರಿವಂಶ ಸಿಂಗ್‌

12:25 AM Sep 10, 2020 | mahesh |

ನವದೆಹಲಿ: ರಾಜ್ಯಸಭೆಯಲ್ಲಿ ಉಪ ಸಭಾಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಯು ರಾಜ್ಯಸಭಾ ಸದಸ್ಯ ಹರಿವಂಶ ನಾರಾಯಣ ಸಿಂಗ್‌ ನಾಮಪತ್ರ ಸಲ್ಲಿಸಿದ್ದಾರೆ. ಮೇಲ್ಮನೆಯಲ್ಲಿನ ಸಂಖ್ಯಾಬಲದ ಲೆಕ್ಕಾಚಾರ ಗಮನಿಸಿ ದಾಗ ಅವರೇ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ.

Advertisement

245 ಸದಸ್ಯ ಬಲದ ರಾಜ್ಯಸಭೆ ಯಲ್ಲಿ ಸರ್ಕಾರದ ಪರವಾಗಿ 116 ಸದಸ್ಯರು ಇದ್ದಾರೆ. ಇದಲ್ಲದೆ, ಬಿಜು ಜನತಾ ದಳ, ವೈ.ಎಸ್‌.ಆರ್‌.ಕಾಂಗ್ರೆಸ್‌, ತೆಲಂಗಾಣ ರಾಷ್ಟ್ರ ಸಮಿತಿ ಸದಸ್ಯರು ಸರ್ಕಾರದ ಅಭ್ಯರ್ಥಿ ಪರವಾಗಿ ಬೆಂಬಲ ಸೂಚಿಸಲಿವೆ. ಕಾಂಗ್ರೆಸ್‌ ಇತರ ಪ್ರತಿಪಕ್ಷಗಳ ಜತೆಗೆ ಸೇರಿಕೊಂಡು ಉಪಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಇಳಿಸುವ ಬಗ್ಗೆ ಯೋಚಿಸುತ್ತಿದ್ದಂತೆಯೇ ಎನ್‌ಡಿಎ ವತಿಯಿಂದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

ಇದೇ ವೇಳೆ, ಲೋಕಸಭೆಯಲ್ಲಿನ ಉಪ ಸಭಾ ಧ್ಯಕ್ಷ ಹುದ್ದೆಯನ್ನು ಸಂಸತ್‌ನ ಮುಂಗಾರು ಅಧಿವೇಶನದಲ್ಲಿಯೇ ಭರ್ತಿ ಮಾಡಬೇಕು ಎಂದು ಕಾಂಗ್ರೆಸ್‌ ಮುಖಂಡ ಅಧಿರ್‌ ರಂಜನ್‌ ಚೌಧರಿ ಒತ್ತಾಯಿ ಸಿದ್ದಾರೆ. ಜತೆಗೆ ಪ್ರತಿಪಕ್ಷಗಳಿಗೆ ಆ ಹುದ್ದೆಯನ್ನು ನೀಡಬೇಕು. ಇಂಥ ಒಂದು ಸಂಪ್ರದಾಯ ಹಿಂದಿನಿಂದಲೂ ಇದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next