Advertisement

“ಡವ್‌’ಸಂತು ಚಿತ್ರಕ್ಕೆ ರಾಜವರ್ಧನ್‌ ಹೀರೋ

11:00 PM Nov 29, 2017 | |

ಡಿಂಗ್ರಿ ನಾಗರಾಜ್‌ ಅವರ ಮಗ  ರಾಜವರ್ಧನ್‌ “ನೂರೊಂದು ನೆನಪು’ ಚಿತ್ರದ ಬಳಿಕ ಕೇಳಿದ ಕಥೆಗಳೆಷ್ಟು ಗೊತ್ತಾ? ಬರೋಬ್ಬರಿ ಹದಿನೈದಕ್ಕೂ ಹೆಚ್ಚು. ಆದರೆ, ಆ ಪೈಕಿ ಅವರು ಯಾವ ಕಥೆಯನ್ನೂ ಒಪ್ಪಿ ಅಪ್ಪಿಕೊಳ್ಳಲಿಲ್ಲ. ಕಾರಣ, ಮತ್ತದೇ ಬಂದ ಕಥೆ ಹಾಗು ಪಾತ್ರಗಳು. ಈಗ ರಾಜವರ್ಧನ್‌ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರವನ್ನು ಹರಿ ಸಂತೋಷ್‌ ನಿರ್ದೇಶನ ಮಾಡುತ್ತಿದ್ದಾರೆ.

Advertisement

ಹೌದು, “ಅಲೆಮಾರಿ’, “ಡವ್‌’, “ಕಾಲೇಜ್‌ ಕುಮಾರ್‌’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸಂತು, ರಾಜವರ್ಧನ್‌ಗೊಂದು ಸಿನಿಮಾ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಹರಿ ಸಂತೋಷ್‌ ಮತ್ತು ರಾಜವರ್ಧನ್‌ ಜತೆಗಿದ್ದಾರೆ. ಮೂರು ವರ್ಷಗಳಿಂದಲೂ ಕಥೆ ಕೆತ್ತನೆಯಲ್ಲಿದ್ದ ಸಂತು, ವಿಕ್ಕಿ ಮತ್ತು ರಾಜವರ್ಧನ್‌ ಇಬ್ಬರಿಗೂ ಒಂದೊಂದು ಕಥೆ ಮಾಡಿದ್ದರು. ಆ ಪೈಕಿ ವಿಕ್ಕಿಗೆ “ಕಾಲೇಜ್‌ ಕುಮಾರ್‌’ ಮಾಡಿದ್ದಾರೆ.

ಆ ಚಿತ್ರದ ಬಳಿಕ ರಾಜವರ್ಧನ್‌ಗೆ ಮಾಡುವುದಾಗಿ ನಿರ್ಧರಿಸಿದ್ದರು ಸಂತು. ಈಗ ಆ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ರಾಜವರ್ಧನ್‌ಗಾಗಿಯೇ ಸಂತು ಎರಡು ಆ್ಯಕ್ಷನ್‌ ಕಥೆಗಳನ್ನು ರೆಡಿ ಮಾಡಿದ್ದಾರಂತೆ. “ಎರಡು ಕಥೆಗಳೂ ಚೆನ್ನಾಗಿವೆ. ಒಳ್ಳೆಯ ತಂಡವೂ ಇದೆ. ಸದ್ಯಕ್ಕೆ ಚಿತ್ರದ ಬಜೆಟ್‌ ಜಾಸ್ತಿ ಕೇಳುತ್ತಿದೆ. ಅದಕ್ಕಾಗಿ ಪ್ಲಾನಿಂಗ್‌ ನಡೆಯುತ್ತಿದೆ.

ಆ ಚಿತ್ರದ ಕಥೆ ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿದೆ. ಹೆಚ್ಚು ಬಿಸಿಲಿನಲ್ಲೇ ಚಿತ್ರೀಕರಣ ನಡೆಯಬೇಕು. ಹಾಗಾಗಿ ಅದಕ್ಕೂ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನಾನು ಸಂತು ಅವರನ್ನು ಮೂರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಒಳ್ಳೆಯ ಬರಹಗಾರರು. ವಿಕ್ಕಿ ಮತ್ತು ನನಗೆ ಕಥೆ ಮಾಡಿ, ಈ ಕಥೆ ನಿಮಗೇ ಮಾಡ್ತೀನಿ ಅಂತ ಹೇಳಿದ್ದರು.

ಅದರ ಪ್ರಕಾರ, ವಿಕ್ಕಿಗೆ ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗ ನನ್ನ ಸರದಿ. ಸದ್ಯಕ್ಕೆ ಚಿತ್ರದ ಬಗ್ಗೆ ಬೇರೇನೂ ಮಾಹಿತಿ ಇಲ್ಲ. ಇಷ್ಟರಲ್ಲೇ ಸಂತು ಜತೆ ಒಂದು ಸಿನಿಮಾ ಆಗುತ್ತೆ ಅನ್ನೋದಷ್ಟೇ ಪಕ್ಕಾ ಆಗಿದೆ. ಅದಕ್ಕಾಗಿ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕಥೆ ಪಕ್ಕಾ ಕಮರ್ಷಿಯಲ್‌ ಆಗಿರುವುದರಿಂದ ಫೈಟ್ಸ್‌ ಅಭ್ಯಾಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ರಾಜವರ್ಧನ್‌. 

Advertisement

ಅಂದಹಾಗೆ, ಚಿತ್ರಕ್ಕೆ ಹೆಸರಿಟ್ಟಿಲ್ಲ. ನಿರ್ದೇಶಕರು ಒಂದಷ್ಟು ಹೆಸರು ಬರೆದಿಟ್ಟುಕೊಂಡಿದ್ದಾರೆ. ಕಥೆಗೆ ಹೊಂದುವ ಒಂದು ಶೀರ್ಷಿಕೆ ಅಂತಿಮವಾಗಬೇಕಷ್ಟೇ. ಇನ್ನು, “ಅಲೆಮಾರಿ’ ಚಿತ್ರದಿಂದಲೂ ಸಂತು ಒಂದು ತಂಡ ಕಟ್ಟಿಕೊಂಡು ಕೆಲಸ ಮಾಡಿದವರು. “ಕಾಲೇಜ್‌ ಕುಮಾರ್‌’ ಚಿತ್ರಕ್ಕೂ ಅದೇ ತಂಡ ಕೆಲಸ ಮಾಡಿತ್ತು. ಈ ಚಿತ್ರಕ್ಕೂ ಶೇ.90 ರಷ್ಟು ಅದೇ ತಂಡ ಕೆಲಸ ಮಾಡಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next