Advertisement

ಕಟೀಲು ದೇಗುಲಕ್ಕೆ ರಾಜನಾಥ ಸಿಂಗ್‌ ಭೇಟಿ

07:56 PM Jan 31, 2020 | Sriram |

ಕಟೀಲು: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸೋಮವಾರ ಸಂಜೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Advertisement

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಸಚಿವರಿಗೆ ತೀರ್ಥ ಪ್ರಸಾದ ಮತ್ತು ದೇವರ ಶೇಷವಸ್ತ್ರ ಹಾಗೂ ದೇವರ ಭಾವಚಿತ್ರನ್ನು ನೀಡಿ ಗೌರವಿಸಲಾಯಿತು.

ನಳಿನ್‌ ಕುಮಾರ್‌ ಕಟೀಲು, ಕೋಟ ಶ್ರೀನಿವಾಸ ಪೂಜಾರಿ, ಉಮಾನಾಥ ಕೋಟ್ಯಾನ್‌, ಈಶ್ವರ ಕಟೀಲು ಸೇರಿದಂತೆ ಗಣ್ಯರು, ಅರ್ಚಕರು ಉಪಸ್ಥಿರಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಭಕ್ತರ ಭೇಟಿಯನ್ನು ಸಂಜೆ 5ರಿಂದ 7ರ ತನಕ ನಿರ್ಬಂಧಿಸಲಾಗಿತ್ತು. ಕಟೀಲು ಭೇಟಿಯ ಬಳಿಕ ಸಚಿವ ಸಿಂಗ್‌ ಬಜಪೆಯ ಮೂಲಕ ದಿಲ್ಲಿಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next