Advertisement

ಕಕ್ಕೇರಾದಲ್ಲಿ ರಾಜುಗೌಡ ಪ್ರಚಾರ

02:18 PM Dec 20, 2021 | Team Udayavani |

ಸುರಪುರ: ಬಂಜಾರ ಸಮುದಾಯದವರು ಯಾರಿಗೂ ಹೆದರುವ ಅಗತ್ಯವಿಲ್ಲ. ತಾಂಡಾದವರೆಲ್ಲರೂ ಒಗ್ಗಟ್ಟಿನಿಂದ ನಿರ್ಭೀತವಾಗಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಎಂದು ಶಾಸಕ ರಾಜುಗೌಡ ಆತ್ಮಸ್ಥೈರ್ಯ ತುಂಬಿದರು.

Advertisement

ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ 15ನೇ ವಾರ್ಡ್‌ ಪೀರನಾಯಕ ತಾಂಡದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ತಾನೂ ಎಲ್ಲ ಜಾತಿ, ಜನಾಂಗಕ್ಕೆ ಆದ್ಯತೆ ನೀಡಿದ್ದೇನೆ. ಬಂಜಾರ ಸಮುದಾಯದವರಿಗೆ ತಾಪಂ, ಜಿಪಂ, ಗ್ರಾಪಂ ಸಮಾನ ಆದ್ಯತೆ ನೀಡಿದ್ದೇನೆ. ತಾಂಡಾಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪುರಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರ ನೀಡಿದಲ್ಲಿ ತಾಂಡಾಗಳ ಸಂಪೂರ್ಣ ಅಭಿವೃದ್ಧಿಗೆ ಅನುಕೂಲವಾಗಲಿದೆ. ಕಾರಣ ಪಕ್ಷದ ಅಭ್ಯರ್ಥಿಗಳ ಪರವಗಿ ಮತ ನೀಡುವಂತೆ ಮನವಿ ಮಾಡಿದರು.

ನಂತರ 13ನೇ ವಾರ್ಡ್‌ನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಮತಯಾಚಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಲ್ಲಿ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕೋರಿದರು. ತಾಲೂಕು ಅಧ್ಯಕ್ಷ ಮೇಲಪ್ಪ ಗುಳಗಿ, ಪ್ರಮುಖರಾದ ರಾಜು ಅಹಲ್ದಾರ್‌, ಸಿದ್ದನಗೌಡ ಕರಿಭಾವಿ, ಪ್ರಕಾಶ ಕುಂಬಾರ, ರಮೇಶ ಶೆಟ್ಟಿ, ಪರಮಣ್ಣ ಪೂಜಾರಿ, ಮಲ್ಲು ದಂಡಿನ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next