Advertisement

ಖರ್ಗೆಗೆ ಸ್ಥಾನ ಕಲ್ಪಿಸಲು ರಾಜ್ಯಸಭಾ ಸ್ಥಾನ ತ್ಯಾಗ

04:43 PM Feb 12, 2021 | Team Udayavani |

ಮುಳಬಾಗಿಲು: ಹಿರಿಯ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ರಾಜ್ಯಸಭೆಯಲ್ಲಿಅವರಿಗೆ ಸ್ಥಾನ ಕಲ್ಪಿಸುವ ಉದ್ದೇಶದಿಂದ ತಮ್ಮ ರಾಜ್ಯಸಭಾ ಸ್ಥಾನವನ್ನು ತ್ಯಾಗ ಮಾಡಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ರಾಜೀವ್‌ಗೌಡ ತಿಳಿಸಿದರು.

Advertisement

ನಗರದ ಕುರುಬರಪೇಟೆ ವಾರ್ಡ್‌ ಸಂಖ್ಯೆ 12ರಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಿಂದೆ ತಮ್ಮ ತಂದೆ  ದಿ.ಎಂ.ವಿ.ವೆಂಕಟಪ್ಪ ಅವರು ಈ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭಾ ಅಧ್ಯಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇಂದಿಗೂ ಜನರು ಅದನ್ನು ನೆನಪಿಟ್ಟುಕೊಂಡಿರುವುದು ತಮಗೆ ಸಂತಸ ತಂದಿದೆ ಎಂದರು.

ಇದನ್ನೂ ಓದಿ :ಎಚ್ಚೆತ್ತ ಪಟ್ಟಣ ಪಂಚಾಯಿತಿ: ಒಡೆದ ಪೈಪ್‌ ಬದಲಾವಣೆ

ರಾಜ್ಯಸಭಾ ಸದಸ್ಯರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ನಮ್ಮ ತಂದೆ ದಿ.ಎಂ.ವಿ.ವೆಂಕಟಪ್ಪ ಮತ್ತು ನಮ್ಮ ದೊಡ್ಡಪ್ಪ ದಿ.ಎಂ.ವಿ.ಕೃಷ್ಣಪ್ಪ ಅವರು ಈ ಕ್ಷೇತ್ರಕ ಅೆR ಪಾರ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸಂಘಟಿಸುವ ಕೆಲಸ ಮಾಡುತ್ತೇವೆ ಎಂದರು. ನಗರಸಭಾ ಸದಸ್ಯ ಮಹಮದ್‌ ಜಬೀವುಲ್ಲಾ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಸುಧೀಂದ್ರಗೌಡ, ಮುಖಂಡರಾದ ಎಂ.ಪಿ.ವಾಜೀದ್‌, ಯರಾದ ಕಿಸಾನ್‌ ಬೀಡಿ ಬಾಷ, ಮಜರ್‌ಪಾಷ, ಅಹಮದ್‌ಪಾಷ, ಚಾಂದ್‌ಪಾಷ, ಷಫೀವುಲ್ಲಾ, ರಮೇಶ, ಮಂಜುನಾಥ್‌, ರಾಜಣ್ಣ, ನೂರುಲ್ಲಾಖಾನ್‌, ತೆಹರಿಮ್‌ ಪಾಷ, ಇಬ್ರಾಹಿಂ ಸಾಬ್‌, ಅನ್ಸರ್‌, ಶಶಿಕುಮಾರ್‌, ಪಾಷ, ಗೌಸ್‌ ಪಾಷ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next