Advertisement

Rajasthan; ಬೀಡಾಡಿ ಬದಲು ನಿರಾಶ್ರಿತ ಗೋವು ಪದ ಬಳಸಿ

12:17 AM Jul 26, 2024 | Team Udayavani |

ಜೈಪುರ: ರಾಜಸ್ಥಾನದಲ್ಲಿ ಇನ್ನು ಮುಂದೆ ಬೀಡಾಡಿ ದನಗಳಿಗೆ ಬೀಡಾಡಿ ಎನ್ನುವಂಥ ಪದ ಬಳಕೆ ಮಾಡು ವಂತಿಲ್ಲ ಎಂದು ಅಲ್ಲಿನ ಪಶುಸಂಗೋಪನ ಸಚಿವ ಜೋರಾರಾಮ್‌ ಕುಮಾವತ್‌ ತಿಳಿಸಿದ್ದಾರೆ. ವಿಧಾನಸಭೆ ಯಲ್ಲಿ ಪಶುಸಂಗೋಪನ ಸಚಿವಾಲಯಕ್ಕೆ ಅನುದಾನ ಬಿಡುಗಡೆಗೊಳಿಸುವ ಕುರಿತು ನಡೆಯುತ್ತಿದ್ದ ಚರ್ಚೆ ವೇಳೆ ಸಚಿವರು ಈ ವಿಚಾರ ಪ್ರಸ್ತಾವಿಸಿದ್ದಾರೆ. ರಾಜ್ಯ ಸರಕಾರವು ಗೋವು ರಕ್ಷಣೆಗೆ ಬದ್ಧವಾಗಿದ್ದು, ಈ ನಿಟ್ಟಿ ನಲ್ಲಿ ಹಲವು ಕ್ರಮಗಳನ್ನೂ ಕೈಗೊಂಡಿದೆ. ಇನ್ನು ಮುಂದೆ ಬೀದಿಯಲ್ಲಿರುವಂಥ ಹಸು ಬೀಡಾಡಿ ಎನ್ನುವಂತಿಲ್ಲ. ಬದಲಿಗೆ ನಿರಾಶ್ರಿತ ಗೋವುಗಳು ಎಂದೇ ಕರೆಯಲಾಗುವುದು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next