Advertisement

Chandrayaan 3 ಮಿಷನ್‌ನಲ್ಲಿ ಹೋದ ‘ಪ್ರಯಾಣಿಕರನ್ನು’ ಅಭಿನಂದಿಸಿದ ರಾಜಸ್ಥಾನ ಸಚಿವ!!

07:50 PM Aug 23, 2023 | Team Udayavani |

ಜೈಪುರ: ಅವಿವೇಕದ ಹೇಳಿಕೆಯಲ್ಲಿ ರಾಜಸ್ಥಾನದ ಕ್ರೀಡಾ ಸಚಿವ ಅಶೋಕ್ ಚಂದನಾ ಚಂದ್ರಯಾನ-3 ಮಿಷನ್‌ನಲ್ಲಿ ಹೋದ “ಪ್ರಯಾಣಿಕರನ್ನು” ಅಭಿನಂದಿಸಿದ್ದಾರೆ.

Advertisement

ಚಂದನಾ ಅವರು ದೇಶಾದ್ಯಂತ ಕುತೂಹಲದಿಂದ ನಿರೀಕ್ಷಿಸಲಾಗಿದ್ದ ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನದ ಮಾನವರಹಿತ ಲ್ಯಾಂಡರ್ ಸ್ಪರ್ಶಿಸುವ ಗಂಟೆಗಳ ಮೊದಲು ಈ ಹೇಳಿಕೆ ನೀಡಿ ವ್ಯಾಪಕವಾಗಿ ಟ್ರೋಲ್ ಗೆ ಗುರಿಯಾಗಿ ಭಾರಿ ಸುದ್ದಿಯಾಗಿದ್ದಾರೆ.

“ನಾವು ಯಶಸ್ವಿಯಾಗಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದರೆ, ಅದರಲ್ಲಿರುವ ಪ್ರಯಾಣಿಕರಿಗೆ ಸೆಲ್ಯೂಟ್ ಮಾಡುತ್ತೇನೆ. ನಮ್ಮ ದೇಶ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಇದಕ್ಕಾಗಿ ನಾನು ದೇಶವಾಸಿಗಳನ್ನು ಅಭಿನಂದಿಸುತ್ತೇನೆ”ಎಂದು ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next