Advertisement

ಅಕ್ರಮ ಕಟ್ಟಡ ತೆರವು; ಜೆಸಿಬಿ ಮುಂಭಾಗ ಹಿಡಿದು ಅಡ್ಡಗಟ್ಟಿದ ಮಹಿಳಾ ಸರ್ ಪಂಚ್…ಮುಂದೇನಾಯ್ತು!

09:36 AM Nov 23, 2019 | Nagendra Trasi |

ರಾಜಸ್ಥಾನ್: ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಬಂದಿದ್ದ ಜೆಸಿಬಿಯ ಕೆಲಸ ತಡೆಯುವ ನಿಟ್ಟಿನಲ್ಲಿ ಗ್ರಾಮದ ಮಹಿಳಾ ಸರ್ ಪಂಚ್(ಮುಖ್ಯಸ್ಥೆ) ಜೆಸಿಬಿ ಮುಂಭಾಗವನ್ನು ಹಿಡಿದು ಅಡ್ಡಗಟ್ಟಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಜೆಸಿಬಿಯನ್ನು ತಡೆದ ಆಕೆಯ ವಿಡಿಯೋ ವೈರಲ್ ಆಗಿದೆ.

Advertisement

ರಾಜಸ್ಥಾನದ ಜಾಲೋರ್ ಗ್ರಾಮದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಜೆಸಿಬಿ ಆಗಮಿಸುತ್ತಿರುವುದನ್ನು ಗಮನಿಸಿದ ರೇಖಾದೇವಿ ಓಡಿ ಬಂದು ಜೆಸಿಬಿಯ ಮುಂಭಾಗ ಹಿಡಿದು ತಡೆಯಲು ಯತ್ನಿಸಿದ್ದರು. ಆದರೆ ಆಕ್ರೋಶಗೊಂಡ ಚಾಲಕ ಜೆಸಿಬಿ ಮುಂಭಾಗ ಮೇಲಕ್ಕೆತ್ತಿದ ಪರಿಣಾಮ ಆಕೆಯ ನೇತಾಡತೊಡಗಿದ್ದಳು.

ನಂತರ ನಿಧಾನಕ್ಕೆ ಕೆಳಗಿಳಿಸಿದಾಗಲೂ ರೇಖಾದೇವಿ ಜೆಸಿಬಿ ಮುಂಭಾಗ ಬಿಡಲೇ ಇಲ್ಲ. ಆತ ಕೂಡಾ ಜೆಸಿಬಿಯನ್ನು ನಿಲ್ಲಿಸದೇ ವಾಪಸ್ ತಿರುಗುತ್ತಿದ್ದಾಗ ಕೊನೆಗೆ ಸುತ್ತಮುತ್ತ ಸೇರಿದವರು ಆಕೆಯನ್ನು ಹಿಡಿದು ಕೆಳಗೆ ಇಳಿಸಿರುವ ದೃಶ್ಯ ಸೆರೆಯಾಗಿದೆ. ನವೆಂಬರ್ 21ರಂದು ನಡೆದಿರುವ ಈ ಘಟನೆಯ ವೀಡಿಯೋ ವೀಕ್ಷಿಸಿ…

Advertisement

Udayavani is now on Telegram. Click here to join our channel and stay updated with the latest news.

Next