Advertisement

ಪಬ್ ಜಿ ಆಡಲು ಮೊಬೈಲ್ ನೀಡದ ಸ್ನೇಹಿತ : ಸಿಟ್ಟಿಗೆದ್ದ ಅಪ್ರಾಪ್ತನಿಂದ ಸ್ನೇಹಿತನ ಭೀಕರ ಕೊಲೆ.!

08:54 PM Nov 17, 2020 | Suhan S |

ರಾಜಸ್ಥಾನ್ /ಜೈಪುರ : ಪಬ್ ಜಿ ಗೇಮ್ ಆಡಲು ಮೊಬೈಲ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸ್ನೇಹಿತನನ್ನೇ ಭೀಕರವಾಗಿ ಕೊಲೆಗೈದ ಘಟನೆ ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ಜೈತ್ಪುರ ಪ್ರದೇಶದಲ್ಲಿ ನಡೆದಿದೆ.

Advertisement

ನವೆಂಬರ್ 9 ರಂದು ಈ ಘಟನೆ ನಡೆದಿದೆ. 14 ವರ್ಷದ ಅಪ್ರಾಪ್ತ ಹುಡುಗನೊಬ್ಬ ತನ್ನ ಸ್ನೇಹಿತ ಹಮೀದ್ ನಲ್ಲಿ ಪಬ್ ಜಿ ಗೇಮ್ ಆಡಲು ಮೊಬೈಲ್ ಕೇಳಿದ್ದಾನೆ. ಹಮೀದ್ ಮೊಬೈಲ್ ನೀಡಲು ನಿರಾಕರಿಸಿದಾಗ, ಸಿಟ್ಟಿಗೆದ್ದ ಅಪ್ರಾಪ್ತ  17 ವರ್ಷದ ಹಮೀದ್ ಗೆ ದೊಡ್ಡ ಕಲ್ಲಿನಿಂದ ಹೊಡೆದಿದ್ದಾನೆ. ಕಲ್ಲಿನ ಏಟಿನಿಂದ ಹಮೀದ್ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾನೆ.

ಮೃತ ಹಮೀದ್ ನ ತಂದೆ ಮಗ ನಾಪತ್ತೆಯಾಗಿರುವ ಕುರಿತು ಭೀಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಹಮೀದ್ ನ ತಂದೆ, ಹಮೀದ್ ತಮ್ಮೊಂದಿಗೆ ಗದ್ದೆಗೆ ಬಂದಿದ್ದ ,ಕೆಲ ಸಮಯದ ಬಳಿಕ ತಾನು ಹಾಗೂ ತನ್ನ ಹೆಂಡತಿ ಕೆಲಸದಿಂದ ಮನೆಗೆ ಬಂದಿದ್ದೇವೆ. ಆದರೆ ಹಮೀದ್ ಅಲ್ಲೇ ಇದ್ದ ಎಂದು ಹೇಳಿದ್ದಾರೆ. ಸಂಜೆಯ ವರೆಗೂ ಹಮೀದ್ ಕಾಣದೆ ಇದ್ದಾಗ ಅಕ್ಕಪಕ್ಕದ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಹಮೀದ್ ಫೋನ್ ಸಂಪರ್ಕ ಮಾಡಿದಾಗ ಸ್ವೀಚ್ ಆಫ್ ಆಗಿತ್ತು, ಭೀತಿಗೊಂಡ ತಂದೆ ತಾಯಿ ದೂರು ದಾಖಲಿಸಿದ್ದಾರೆ.

ಹಮೀದ್ ತಂದೆ ರಶೀದ್ ನೀಡಿದ ದೂರಿನ್ವಯ ಪೊಲೀಸರು ತನಿಖೆ ಆರಂಭಿದ್ದಾರೆ. ಹಮೀದ್ ಕಾಲ್ ಮಾಹಿತಿಯನ್ನು ಆಧಾರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆಯಲ್ಲಿ, ಪಬ್ ಜಿ ಮೊಬೈಲ್ ಕೊಡಲು ನಿರಾಕರಿಸಿದ ಕಾರಣಕ್ಕೆ ದೊಡ್ಡ ಕಲ್ಲಿನಿಂದ ಹೊಡೆದು ಸಾಯಿಸಿದ ಸತ್ಯವನ್ನು ಆರೋಪಿ ಹೊರ ಹಾಕಿದ್ದಾನೆ.

ನವೆಂಬರ್ 11 ರಂದು  ಭರ್ವಾಲಿ ಬೆಟ್ಟದ ಪಕ್ಕದಲ್ಲಿ ಹಮೀದ್ ಮೃತ ದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಜೇಂದ್ರ ಸಿಂಗ್ ರಾಥೋಡ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪೊಲೀಸರು ದೂರು ಬಂದ 48 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ಸಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next