Advertisement

ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ನಾಲ್ಕು ಪಟ್ಟು ಹಣಕಾಸು ನೆರವು ಹೆಚ್ಚಿಸಿದ ಕೇಂದ್ರ

09:42 AM Oct 07, 2019 | keerthan |

ಹೊಸದಿಲ್ಲಿ: ಯುದ್ಧದ ಸಮಯದಲ್ಲಿ ಮಡಿದ ಮತ್ತು ಗಾಯಾಳಾದ ಯೋಧರಿಗೆ ಮತ್ತು ಕುಟುಂಬಿಕರಿಗೆ ನೀಡಲಾಗುವ ವಿತ್ತೀಯ ನೆರವನ್ನು ನಾಲ್ಕು ಪಟ್ಟು ಹೆಚ್ಚಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಸೇನಾ ಯುದ್ದಾಪಘಾತಗಳ ಕಲ್ಯಾಣ ನಿಧಿಯಿಂದ ಈ ಮೊತ್ತವನ್ನು ಕುಟುಂಬಗಳಿಗೆ ನೀಡಲಾಗುತ್ತದೆ.

Advertisement

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ನಿರ್ಧಾರಕ್ಕೆ ಅನುಮೋದನೆ ನೀಡಿದ್ದು ಈ ಮೂಲಕ ಇನ್ನು ಮುಂದೆ ಎರಡು ಲಕ್ಷದಿಂದ ಎಂಟು ಲಕ್ಷದವರೆಗೆ ಹಣಕಾಸು ನೆರವು ಯೋಧರಿಗೆ ಮತ್ತು ಕುಟುಂಬಿಕರಿಗೆ ಸಿಗಲಿದೆ.

ಇಷ್ಟರವರಗೆ ಯುದ್ಧದಲ್ಲಿ ಮಡಿದವರಿಗೆ ಮತ್ತು ಶೇ.60ಕ್ಕಿಂತ ಹೆಚ್ಚಿನ ಗಾಯಗೊಂಡವರಿಗೆ ಎರಡು ಲಕ್ಷ ನೆರವು ಸಿಗುತ್ತಿತ್ತು. ಇದನ್ನೀಗ ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಗಾಯಗೊಂಡ ಯೋಧರಿಗೆ ಒಂದು ಲಕ್ಷ ನೆರವು ನೀಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next