Advertisement

ಜಿಲ್ಲೆಗೂ ರಾಜ್‌ಗೂ ಅವಿನಾಭಾವ ಸಂಬಂಧ

02:13 PM Apr 24, 2019 | Suhan S |

ರಾಮನಗರ: ಏ.24 ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್‌ ಅವರ 91ನೇ ಜನ್ಮದಿನಾಚರಣೆ. ರಾಮನಗರಕ್ಕೂ ಡಾ.ರಾಜ್‌ ಕುಮಾರ್‌ ಅವರಿಗೂ ಇರುವ ಅವಿನಾಭಾವ ಸಂಬಂಧವಿದೆ ಎನ್ನುವುದಕ್ಕೆ ಅವರ ಚಲನಚಿತ್ರಗಳು, ವಿವಿಧ ಅಭಿವೃದ್ಧಿಗೆ ಸಹಕರಿಸಿದ ದಾಖಲೆಗಳು ಸಾಕ್ಷಿಯಾಗಿದೆ.

Advertisement

ಮುತ್ತೆತ್ತಿ ಆಂಜನೇಯನ ಭಕ್ತ: ಜಿಲ್ಲೆಯ ಕನಕಪುರ ತಾಲೂಕಿನ ಮುತ್ತೆತ್ತಿ ಅರಣ್ಯ ಪ್ರದೇಶದಲ್ಲಿ ಶ್ರೀ ಆಂಜನೇಯನ ದೇವಾಲಯವಿದೆ. ಮುತ್ತುರಾಜ್‌ ಡಾ.ರಾಜ್‌ಕುಮಾರ್‌ ಮೂಲ ಹೆಸರು. ಅವರು ಬದುಕಿದ್ದಾಗ ಕುಟುಂಬ ಸಮೇತರಾಗಿ ಈ ದೇವಾಲಯಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿಕೊಳ್ಳುತ್ತಿದ್ದರು. ದೇವಸ್ಥಾನದ ಅಭಿವೃದ್ಧಿಗೂ ಅವರ ಕೊಡುಗೆ ಇದೆ ಎಂಬುದು ದೇವಾಲಯದ ಭಕ್ತರ ಅಭಿಪ್ರಾಯ.

ಜಿಲ್ಲೆಯಲ್ಲಿ ಚಿತ್ರೀಕರಣ: ಡಾ.ರಾಜ್‌ ಕುಮಾರ್‌ ಅವರ ಅನೇಕ ಚಿತ್ರಗಳು ರಾಮನಗರ ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿವೆ. ನಾ ನಿನ್ನ ಮರೆಯಲಾರೆ, ಹುಲಿಯ ಹಾಲಿನ ಮೇವು, ಜಗ ಮೆಚ್ಚಿದ ಮಗ, ದೃವತಾರೆ, ದೇವತಾ ಮನುಷ್ಯ, ನಾನೊಬ್ಬ ಕಳ್ಳ, ಅಪೂರ್ವ ಸಂಗಮ, ಶೃತಿ ಸೇರಿದಾಗ, ಕೆರಳಿದ ಸಿಂಹ, ಲಗ್ನ ಪತ್ರಿಕೆ, ಯಾರಿವನು, ಸಂಪತ್ತಿಗೆ ಸವಾಲ್, ತಾಯಿಗೆ ತಕ್ಕ ಮಗ ಮುಂತಾದ ಚಿತ್ರಗಳು ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿವೆ.

ಶ್ರೀ ರಾಮದೇವರ ಬೆಟ್ಟ, ಕೆಂಗಲ್, ಸಾವನದುರ್ಗ ಬೆಟ್ಟ ಮತ್ತು ಅರಣ್ಯ ಪ್ರದೇಶ, ಮಾಗಡಿ ಶ್ರೀರಂಗನಾಥ ದೇವಾಲಯ, ಬೈರಮಂಗಲ, ಮಂಚನಬಲೆ, ಚನ್ನಪಟ್ಟಣ, ಮಾಗಡಿ, ಕನಕಪುರ ತಾಲೂಕುಗಳಲ್ಲಿಯೂ ಡಾ.ರಾಜ್‌ ಅವರ ಚಿತ್ರಗಳು ಚಿತ್ರೀಕರಣಗೊಂಡಿದೆ.

ಭವನ ನಿರ್ಮಾಣಕ್ಕೆ ಸಂಗೀತ ಕಾರ್ಯಕ್ರಮ: ರಾಮನಗರದಲ್ಲಿ ನಗರಸಭೆಯ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಆರ್ಥಿಕ ಸಂಪನ್ಮೂಲದ ಕೊರತೆ ಉಂಟಾಗಿತ್ತು. ಈ ಕೊರತೆ ನೀಗಿಸಲು ಆಗ ಅಧ್ಯಕ್ಷರಾಗಿದ್ದ ಸೈಯದ್‌ ಜಿಯಾವುಲ್ಲಾ ಮತ್ತು ತಂಡ ಡಾ.ರಾಜ್‌ ಕುಮಾರ್‌ ಮೊರೆ ಹೋದರು. ಸಂಗೀತ ಸಂಜೆ ನಡೆಸಿಕೊಟ್ಟು ಬರುವ ಆದಾಯವನ್ನು ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ಡಾ.ರಾಜ್‌ ಒಪ್ಪಿಗೆ ಕೊಟ್ಟರು. ಅದರಂತೆ ಅವರೇ ಹೆಚ್ಚು ಕಾಳಜಿವಹಿಸಿ 1994ರಲ್ಲಿ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. 3 ಲಕ್ಷಕ್ಕು ಅಧಿಕ ಮೊತ್ತದ ಹಣವನ್ನು ಭವನ ನಿರ್ಮಾಣಕ್ಕೆ ತಲುಪಿಸಿದ್ದು, ಇಂದು ರಾಮನಗರದ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.

Advertisement

ಪುನೀತ್‌ ಫಾರಂ: ವರನಟ ಡಾ.ರಾಜ್‌ ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯಲ್ಲಿ ತೋಟವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ತೋಟಕ್ಕೆ ಪುನಿತ್‌ ಫಾರಂ ಎಂದು ಹೆಸರಿಟ್ಟಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ಬದಿಯಲ್ಲೇ ಈ ಫಾರಂ ಇದೆ. ಬಿಡುವಿನ ವೇಳೆಯಲ್ಲಿ ಕುಟುಂಬ ಸಮೇತ ಈ ತೋಟದಲ್ಲಿ ನಿರ್ಮಿಸಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೀಗೆ ವಿಶ್ರಾಂತಿಗೆ ಆಗಮಿಸಿದಾಗ ಬಿಡದಿಯ ತಟ್ಟೆ ಇಡ್ಲಿಯನ್ನು ತರಿಸಿಕೊಳ್ಳುತ್ತಿದ್ದರು ಎಂದು ಆ ಭಾಗದ ಅವರ ಅಭಿಮಾನಿಗಳು ತಿಳಿಸಿದ್ದಾರೆ.

ಕಾಂಪ್ಲೆಕ್ಸ್‌, ರಸ್ತೆಗೆ ಹೆಸರು: ನಗರದ ವಿಜಯನಗರ ಬಡಾವಣೆಯ ಮುಖ್ಯರಸ್ತೆಗೆ ಅಭಿಮಾನಿಗಳು ಡಾ.ರಾಜ್‌ ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಿದ್ದಾರೆ. ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿ ದಂಡೆಯ ಮೇಲೆ ನಗರಸಭೆ ನಿರ್ಮಿಸಿರುವ ವಾಣಿಜ್ಯ ಸಂಕಿರ್ಣಕ್ಕೆ ನಗರಸಭೆ ಡಾ.ರಾಜ್‌ಕುಮಾರ್‌ ವಾಣಿಜ್ಯ ಸಂಕಿರ್ಣ ಎಂದು ನಾಮಕರಣ ಮಾಡಿತ್ತಾದರು ಅದರ ಬಳಕೆಯಾಗುತ್ತಿಲ್ಲ ಎಂದು ವರನಟನ ಅಭಿಮಾನಿಗಳಲ್ಲಿ ಆಕ್ರೋಶವಿದೆ.

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್‌ 91ನೇ ಜನ್ಮದಿನಾಚರಣೆಯನ್ನು ಏ.24ರಂದು ರಾಜ್ಯ ಸರ್ಕಾರವೇ ನಿರ್ಧರಿಸಿರುವುದು ಸ್ವಾಗತಾರ್ಹ. ಡಾ.ರಾಜ್‌ಕುಮಾರ್‌ ಅವರ ಹಲವು ಯಶಸ್ವಿ ಚಿತ್ರಗಳು ಮಾಗಡಿ ತಾಲೂಕಿನ ಬಹುತೇಕ ಪ್ರಸಿದ್ಧ ತಾಣಗಳಲ್ಲಿ ಚಿತ್ರಿಸಲಾಗಿದೆ.

ಸಂಪತ್ತಿಗೆ ಸವಾಲು, ಹುಲಿ ಹಾಲಿನ ಮೇವು, ದೇವತಾ ಮನುಷ್ಯ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳು ಮಾಗಡಿ ರಂಗನಾಥಸ್ವಾಮಿ ದೇಗುಲ, ಸಾವನದುರ್ಗ, ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯ, ಮಾಂಡವ್ಯ ಗುಹೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.

ಸಹೋದ್ಯೋಗಿಗಳೊಂದಿಗೆ ಭೋಜನ: ಡಾ.ರಾಜ್‌ಕುಮಾರ್‌ ಚಿತ್ರೀಕರಣದ ನಂತರ ಇಲ್ಲಿನ ಮಾಂಡವ್ಯ ಗುಹೆ ಬಳಿ ಊಟಕ್ಕೆ ಕೂರುತ್ತಿದ್ದರು. ಅವರು ಸಹದೋಗಿಗಳೊಂದಿಗೆ ಕುಳಿತು ನಗು ನಗುತ್ತಲೆ ಸಂತೋಷದಿಂದ ಊಟ ಮಾಡುತ್ತಿದ್ದರು. ಊಟದೊಂದಿಗೆ ಮಾಂಸಾಹಾರ ಸಹ ಇರುತ್ತಿತ್ತು. ಅವರಿಗೆ ಮೇಕೆ ಕಾಲು ಸೂಪು ಅಚ್ಚುಮೆಚ್ಚು ಎಂದು ಇಲ್ಲಿನ ಹಿರಿಯ ಅಭಿಮಾನಿ ಜಯರಾಮ್‌ ತಿಳಿಸಿದ್ದಾರೆ.

ರಾಜ್‌ಕುಮಾರ್‌ ರಸ್ತೆ: ಮಾಗಡಿ ಪಟ್ಟಣದ ಮುಖ್ಯರಸ್ತೆಗೆ ಡಾ.ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಪಟ್ಟಣದಲ್ಲಿ ಡಾ.ರಾಜಕುಮಾರ್‌ ಅಭಿಮಾನಿಗಳ ಬಳಗವಿದೆ. ಡಾ.ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆ ಮತ್ತು ಅವರ ಪುಣ್ಯತಿಥಿ ಕಾರ್ಯಕ್ರಮಗಳು ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ ಶಿಬಿರಗಳು ಸೇರಿದಂತೆ ಸಮಾಜಮುಖೀ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸುಮಾರ 205ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವರನಟ ಡಾ.ರಾಜ್‌ಕುಮಾರ್‌ಗೆ ಹಲವು ಪ್ರಶಸ್ತಿಗಳು ಲಭಿಸಿದೆ. ಏ.24ರ 1929 ರಲ್ಲಿ ಗಾಜನೂರಿನಲ್ಲಿ ಜನಿಸಿರುವ ಮುತ್ತುರಾಜ್‌ 1954ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ರಾಜ್‌ಕುಮಾರ್‌ ಆದರು. ಡಾ.ರಾಜ್‌ಕುಮಾರ್‌ ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಅಭಿಮಾನಿಗಳಿಗೂ ಡಾ.ರಾಜ್‌ಕುಮಾರ್‌ ಅಣ್ಣವೆುೕ ಆಗಿದ್ದಾರೆ. ಅವರ ಜನ್ಮದಿನಾವರಣೆ ಅರ್ಥಪೂರ್ಣವಾಗಿ ಆಚರಿಸುವುದು ಸಮಾಜದ ಹೊಣೆ.

 

ರಾಜ್‌ಕುಮಾರ್‌ ಜಯಂತಿಗೆ ಸರ್ಕಾರ ನಿರ್ಧಾರ

 ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್‌ 91ನೇ ಜನ್ಮದಿನಾಚರಣೆಯನ್ನು ಏ.24ರಂದು ರಾಜ್ಯ ಸರ್ಕಾರವೇ ನಿರ್ಧರಿಸಿರುವುದು ಸ್ವಾಗತಾರ್ಹ. ಡಾ.ರಾಜ್‌ಕುಮಾರ್‌ ಅವರ ಹಲವು ಯಶಸ್ವಿ ಚಿತ್ರಗಳು ಮಾಗಡಿ ತಾಲೂಕಿನ ಬಹುತೇಕ ಪ್ರಸಿದ್ಧ ತಾಣಗಳಲ್ಲಿ ಚಿತ್ರಿಸಲಾಗಿದೆ. ಸಂಪತ್ತಿಗೆ ಸವಾಲು, ಹುಲಿ ಹಾಲಿನ ಮೇವು, ದೇವತಾ ಮನುಷ್ಯ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳು ಮಾಗಡಿ ರಂಗನಾಥಸ್ವಾಮಿ ದೇಗುಲ, ಸಾವನದುರ್ಗ, ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯ, ಮಾಂಡವ್ಯ ಗುಹೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಸಹೋದ್ಯೋಗಿಗಳೊಂದಿಗೆ ಭೋಜನ: ಡಾ.ರಾಜ್‌ಕುಮಾರ್‌ ಚಿತ್ರೀಕರಣದ ನಂತರ ಇಲ್ಲಿನ ಮಾಂಡವ್ಯ ಗುಹೆ ಬಳಿ ಊಟಕ್ಕೆ ಕೂರುತ್ತಿದ್ದರು. ಅವರು ಸಹದೋಗಿಗಳೊಂದಿಗೆ ಕುಳಿತು ನಗು ನಗುತ್ತಲೆ ಸಂತೋಷದಿಂದ ಊಟ ಮಾಡುತ್ತಿದ್ದರು. ಊಟದೊಂದಿಗೆ ಮಾಂಸಾಹಾರ ಸಹ ಇರುತ್ತಿತ್ತು. ಅವರಿಗೆ ಮೇಕೆ ಕಾಲು ಸೂಪು ಅಚ್ಚುಮೆಚ್ಚು ಎಂದು ಇಲ್ಲಿನ ಹಿರಿಯ ಅಭಿಮಾನಿ ಜಯರಾಮ್‌ ತಿಳಿಸಿದ್ದಾರೆ. ರಾಜ್‌ಕುಮಾರ್‌ ರಸ್ತೆ: ಮಾಗಡಿ ಪಟ್ಟಣದ ಮುಖ್ಯರಸ್ತೆಗೆ ಡಾ.ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಪಟ್ಟಣದಲ್ಲಿ ಡಾ.ರಾಜಕುಮಾರ್‌ ಅಭಿಮಾನಿಗಳ ಬಳಗವಿದೆ. ಡಾ.ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆ ಮತ್ತು ಅವರ ಪುಣ್ಯತಿಥಿ ಕಾರ್ಯಕ್ರಮಗಳು ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ ಶಿಬಿರಗಳು ಸೇರಿದಂತೆ ಸಮಾಜಮುಖೀ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸುಮಾರ 205ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವರನಟ ಡಾ.ರಾಜ್‌ಕುಮಾರ್‌ಗೆ ಹಲವು ಪ್ರಶಸ್ತಿಗಳು ಲಭಿಸಿದೆ. ಏ.24ರ 1929 ರಲ್ಲಿ ಗಾಜನೂರಿನಲ್ಲಿ ಜನಿಸಿರುವ ಮುತ್ತುರಾಜ್‌ 1954ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ರಾಜ್‌ಕುಮಾರ್‌ ಆದರು. ಡಾ.ರಾಜ್‌ಕುಮಾರ್‌ ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಅಭಿಮಾನಿಗಳಿಗೂ ಡಾ.ರಾಜ್‌ಕುಮಾರ್‌ ಅಣ್ಣವೆುೕ ಆಗಿದ್ದಾರೆ. ಅವರ ಜನ್ಮದಿನಾವರಣೆ ಅರ್ಥಪೂರ್ಣವಾಗಿ ಆಚರಿಸುವುದು ಸಮಾಜದ ಹೊಣೆ.
Advertisement

Udayavani is now on Telegram. Click here to join our channel and stay updated with the latest news.

Next