Advertisement

ಹಸೆಮಣೆ ಏರಿದ ಕನ್ನಡ ಚಿತ್ರರಂಗದ ನಟ ರಾಜ್‌ ದೀಪಕ್‌ ಶೆಟ್ಟಿ

10:33 AM Nov 05, 2020 | sudhir |

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ನಟ ರಾಜ್‌ ದೀಪಕ್‌ ಶೆಟ್ಟಿ ಬುಧವಾರ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.

Advertisement

ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ, ರಾಜ್‌ ದೀಪಕ್‌ ಶೆಟ್ಟಿ, ತಮ್ಮ ಬಹುಕಾಲದ ಗೆಳತಿ ಹಾಗೂ ವೃತ್ತಿಯಲ್ಲಿ ಇವೆಂಟ್‌ ಆರ್ಗನೈಸರ್‌ ಆಗಿರುವ ಸೋನಿಯಾ ರಾಡ್ರಿಗಸ್‌ ಜೊತೆ ಸಪ್ತಪದಿ ತುಳಿದರು. ಕೋವಿಡ್‌
ಆತಂಕದಿಂದಾಗಿ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ರಾಜ್‌ ದೀಪಕ್‌ ಶೆಟ್ಟಿ ಮತ್ತು ಸೋನಿಯಾ ರಾಡ್ರಿಗಸ್‌ ಕುಟುಂಬದ ವರ್ಗ ಮತ್ತು ಆಪ್ತರಷ್ಟೇ ಭಾಗಿಯಾಗಿದ್ದು, ನೂತನ ವಧುವರರಿಗೆ ಶುಭ ಕೋರಿದರು.

ಸದ್ಯ ಕನ್ನಡದಲ್ಲಿ ರಾಜ್‌ ದೀಪಕ್‌ ಶೆಟ್ಟಿ ಅಭಿನಯದ “ರಣಂ’, “ಕೋಟಿಗೊಬ್ಬ-3′, “ರವಿಚಂದ್ರ’, “ಗಡಿಯಾರ’ ಚಿತ್ರಗಳು
ಬಿಡುಗಡೆಗೆ ತಯಾರಾಗಿದೆ. ಕನ್ನಡದ ಜತೆ ತೆಲುಗು ಹಾಗೂ ತಮಿಳಿನಲ್ಲೂ ಸಾಕಷ್ಟು ಬೇಡಿಕೆಯ ಖಳನಟನಾಗಿರುವ
ರಾಜ್‌ ದೀಪಕ್‌ ಶೆಟ್ಟಿ ಅವರು ಅಲ್ಲು ಅರ್ಜುನ್‌ ಅಭಿನಯದ “ಪುಷ್ಪಾ’, ವಿಕ್ಟರಿ ವೆಂಕಟೇಶ್‌ ಅಭಿನಯದ “ನಾರಪ್ಪ’, ರಾಣಾ
ದಗ್ಗುಬಾಟಿ ಅಭಿನಯದ “ವಿರಾಟಪರ್ವಂ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next