Advertisement

ಬಿಸಿಲ ಝಳಕ್ಕೆ ತಂಪೆರೆದ ಮಳೆರಾಯ

05:03 AM Mar 25, 2019 | Team Udayavani |

ಬೆಂಗಳೂರು/ಸುಬ್ರಹ್ಮಣ್ಯ: ರಾಜ್ಯದಲ್ಲಿ ಕಾವೇರುತ್ತಿರುವ ತಾಪಮಾನಕ್ಕೆ ರವಿವಾರ ವರುಣರಾಯ ಕೊಂಚ ತಂಪೆರೆದಿದ್ದಾನೆ.

Advertisement

ರವಿವಾರ ಸಂಜೆ 5.30ರ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ ಪರಿಸರದಲ್ಲಿ ಸಾಧಾರಣ, ರಾಯಚೂರು, ಬಳ್ಳಾರಿ, ತುಮಕೂರು, ಕೊಪ್ಪಳ, ಚಿತ್ರದುರ್ಗ, ಕೊಡಗು, ಚಿಕ್ಕಮಗಳೂರು ಸಹಿತ ಹಲವೆಡೆ ಉತ್ತಮ ಮಳೆಯಾಗಿದೆ. ಉಳಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತರ ಒಳನಾಡಿನಲ್ಲಿ ಏರ್ಪಟ್ಟಿರುವ ಮೇಲ್ಮೆ „ ಸುಳಿಗಾಳಿ ಹಾಗೂ ಕಡಿಮೆ ಒತ್ತಡದ ತಗ್ಗು (ಟ್ರಫ್) ಪರಿಣಾಮ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿರುವ ಟ್ರಫ್ ಹಾಗೂ ಮೇಲ್ಮೆ„ ಸುಳಿಗಾಳಿಯೊಂದಿಗೆ ತೀವ್ರ ಉಷ್ಣಾಂಶದಿಂದಾಗಿ ಮೋಡಗಳು ಸೃಷ್ಟಿಯಾಗಿದ್ದವು. ಪರಿಣಾಮ ರವಿವಾರ ಸಂಜೆ ವೇಳೆಗೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದ್ದು, ಸೋಮವಾರ ಸಂಜೆಯೂ ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next