Advertisement

ಸೇತುವೆ ಮೇಲೆ ಸಂಚರಿಸಿದರೆ ಕೆಸರು ನೀರಿನ ಸ್ನಾನ!

03:20 AM Jun 20, 2018 | Karthik A |

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ವಹಣೆ ಮಾಡದಿರುವುದು ಮಳೆಗಾಲದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಇಲ್ಲಿನ ಸೇತುವೆಗಳ ಮೇಲೆ ಸಂಚರಿಸುವ ಪಾದಚಾರಿಗಳು ಕೆಸರು ನೀರಿನಿಂದ ಸ್ನಾನ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಈ ರಾಷ್ಟ್ರೀಯ ಹೆದ್ದಾರಿಯು ಮೇಲ್ದರ್ಜೆಗೇರಿದ್ದು, ಚತುಷ್ಪಥವಾಗಿ ಬದಲಾಗುತ್ತಿದೆ. ಇದರ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಅಗೆದು ಹಾಕಲಾಗಿದೆ. ಇನ್ನೊಂದೆಡೆ ಈಗಿದ್ದ ಹೆದ್ದಾರಿಯನ್ನು ನಿರ್ವಹಣೆ ಮಾಡುವವರೇ ಇಲ್ಲದೆ ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡ- ಗಂಟಿಗಳು, ಪೊದೆಗಳು ಹುಲುಸಾಗಿ ಬೆಳೆದು, ಹೆದ್ದಾರಿಯನ್ನು ಆವರಿಸಿವೆ. ಇದ್ದ ಚರಂಡಿಯು ಹೂಳು ತುಂಬಿ ಮುಚ್ಚಿದ್ದು, ಇವುಗಳ ಮೇಲೆ ಹುಲ್ಲು, ಗಿಡಗಂಟಿಗಳು ಆವರಿಸಿವೆ.

Advertisement

ಕೆಸರಿನ ಅಭಿಷೇಕ!
ಉಪ್ಪಿನಂಗಡಿಯಲ್ಲಿರುವ ಕುಮಾರಧಾರಾ ನದಿಯ ಸೇತುವೆ ಮೇಲೆ ಪಾದಚಾರಿಗಳಿಗೆ ನಡೆದಾಡಲು ಕಷ್ಟಕರವಾದ ಸ್ಥಿತಿ ನಿರ್ಮಾಣಗೊಂಡಿದೆ. ಸೇತುವೆಯಲ್ಲಿ ನೀರು ಹೋಗಲು ಮಾಡಲಾದ ರಂಧ್ರಗಳು ಮಣ್ಣು, ಕಸಕಡ್ಡಿಗಳಿಂದ ತುಂಬಿ ಮುಚ್ಚಿ ಹೋಗಿದ್ದು, ನೀರಿನ ಹರಿಯುವಿಕೆಗೆ ತಡೆಯಾಗಿ, ಮಳೆ ಬಂದ ಸಂದರ್ಭ ನೀರು ಸೇತುವೆಯ ಮೇಲೆಯೇ ನಿಂತು ಸೇತುವೆಯೇ ದೊಡ್ಡ ಹಳ್ಳವಾಗಿ ಮಾರ್ಪಾಡಾಗುತ್ತದೆ. ಇದರ ಮೇಲೆ ವಾಹನಗಳು ಸಂಚರಿಸಿದರೆ ಬದಿಯಲ್ಲಿ ನಡೆದುಕೊಂಡು ಹೋಗುವವರ, ದ್ವಿಚಕ್ರ ವಾಹನ ಸವಾರರ ಮೈಮೇಲೆಲ್ಲ ಕೆಸರು ನೀರಿನ ಪ್ರೋಕ್ಷಣೆಯಾಗುತ್ತದೆ. ಇದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ದ್ವಿಚಕ್ರ, ಅಟೋರಿಕ್ಷಾ ಸವಾರರು ಸಮಸ್ಯೆಗೆ ಸಿಲುಕುವಂತಾಗಿದೆ. ಇದು ಒಂದೇ ಸೇತುವೆಯ ಕಥೆಯಲ್ಲ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಹೆಚ್ಚಿನ ಎಲ್ಲ ಸೇತುವೆಗಳಲ್ಲೂ ಇದೇ ಅವಸ್ಥೆ.


ಆದರೆ ಇಕ್ಕೆಲಗಳಲ್ಲಿ ತುದಿಯಿಂದ ಕೊನೆಯವರೆಗೆ ಬೆಳೆದಿರುವ ಹುಲ್ಲುಗಳು ಹಾಗೆಯೇ ಇರುವುದರಿಂದ ಹಾಗೂ ಸೇತುವೆಯಲ್ಲಿ ಮಣ್ಣು ತುಂಬಿರುವುದರಿಂದ ರಂಧ್ರಗಳ ಮಣ್ಣು ತೆರವುಗೊಳಿಸಿದ ನಾಲ್ಕೈದು ದಿನದಲ್ಲೇ ಮತ್ತೆ ಸೇತುವೆಯ ಮೇಲಿನ ನೀರು ಹರಿದು ಹೋಗಲು ತಡೆಯಾಗಿ ಮೊದಲಿನ ಹಾಗೆ ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ಇನ್ನಾದರೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡು ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮುಂದಾಗಬೇಕೆನ್ನುವುದೇ ಸಾರ್ವಜನಿಕರ ಆಗ್ರಹ.

ಯುವಕರಿಂದ ಶ್ರಮದಾನ! 
ಈ ಬಾರಿ ಮಳೆ ಬಂದು ಹಲವು ಮಂದಿ ಕೆಸರು ನೀರಿನಲ್ಲಿ ಸ್ನಾನ ಮಾಡಿದ ಬಳಿಕವೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಳ್ಳದಿದ್ದಾಗ ಬೇಸತ್ತ ನೆಕ್ಕಿಲಾಡಿಯ ಕೆಲ ಯುವಕರು ಕುಮಾರಧಾರಾ ನದಿಯ ಸೇತುವೆಯ ಇಕ್ಕೆಲಗಳಲ್ಲಿ ಹೂಳು ತುಂಬಿ ಮುಚ್ಚಿಹೋಗಿದ್ದ ರಂಧ್ರಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುವ ಸಾಮಾಜಿಕ ಕಳಕಳಿ ತೋರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next