Advertisement

ಕಾಂಪೌಂಡ್‌ ಒಳಗೆ ಮಳೆ ನೀರು: ದೂರು ನೀಡಿದರೂ ಸ್ಪಂದಿಸಿಲ್ಲ

11:45 AM May 25, 2018 | Team Udayavani |

ಮಹಾನಗರ: ಮಳೆ ಬಂದರೆ ಸಾಕು ಆ ರಸ್ತೆಯ ಮಳೆ ನೀರು ಬಂದು ಈ ಮನೆಯ ಕಾಂಪೌಂಡ್‌ ಸೇರುತ್ತದೆ. ಈ ಸಮಸ್ಯೆಯ ಬಗ್ಗೆ ಹಲವು ವರ್ಷಗಳಿಂದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನೆ ಮಾಲಕ ಪ್ರಭಾಕರ ಸೋಮಯಾಜಿ ತಿಳಿಸಿದ್ದಾರೆ. ಮುಂಗಾರು- ಮುಂಜಾಗ್ರತೆ ಸುದಿನ ಅಭಿಯಾನಕ್ಕೆ ಸ್ಪಂದಿಸಿರುವ ಪ್ರಭಾಕರ ಅವರು ತಮ್ಮ ಸಮಸ್ಯೆಯನ್ನು ತಿಳಿಸಿದ್ದಾರೆ.

Advertisement

ಕೊಟ್ಟಾರ ಇನ್ಫೋಸಿಸ್‌ ಬಳಿಯ ಕಲ್ಬಾವಿ ರಸ್ತೆಯ ಲ್ಲಿರುವ ಪ್ರಭಾಕರ್‌ ಅವರ ಮನೆಯ ಕಾಂಪೌಂಡ್‌ಗೆ ಮಳೆ ನೀರು ನೇರವಾಗಿ ಬಂದು ಸೇರುತ್ತದೆ. ಮಳೆಗಾಲದಲ್ಲಿ ಇದನ್ನು ಸ್ವಚ್ಛಗೊಳಿಸುವುದೇ ಇವರಿಗೆ ದೊಡ್ಡ ಸಮಸ್ಯೆ. ಆದರೆ ಈ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ. ಹಲವು ವರ್ಷಗಳಿಂದ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಸಮಸ್ಯೆ ಪರಿಹರಿಸಿಲ್ಲ.

ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡದೆ ಇರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗುತ್ತಿದ್ದು, ಅಧಿಕಾರಿಗಳು ಸಮಸ್ಯೆಯ ಬಗ್ಗೆ ತಿಳಿಸಿದರೂ ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ ಎನ್ನಲಾಗಿದೆ. ಈಗ ಪ್ರಭಾಕರ್‌ ಅವರು ಮನೆಯ ಗೇಟ್‌ಗೆ ಕಬ್ಬಿಣದ ಶೀಟ್‌ಗಳನ್ನು ಬಳಸಿ ಮಳೆ ನೀರು ಒಳಗೆ ಬಾರದಂತೆ ಮಾಡಿದ್ದರೂ, ದೊಡ್ಡ ಮಳೆ ಬಂದರೆ ಮಳೆ ನೀರು ಮತ್ತೆ ಕಾಂಪೌಂಡ್‌ ಒಳಗೆ ಸೇರುತ್ತದೆ. ಈ ಸಮಸ್ಯೆ ಬಗ್ಗೆ ಹಲವು ಬಾರಿ ಸ್ಥಳೀಯ ಕಾರ್ಪೊರೇಟರ್‌, ಮಹಾ ನಗರ ಪಾಲಿಕೆ ಆಯುಕ್ತ, ಎಂಜಿನಿಯರ್‌ಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next