Advertisement

ಮಳೆ: ಮರ ಬಿದ್ದು ಇಬ್ಬರು ಸಾವು

06:10 AM Apr 23, 2018 | |

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಪೂರ್ವ ಮುಂಗಾರು ಮಳೆಯಾಗಿದ್ದು, ಮಳೆ ಸಂಬಂಧಿ ಅವಘಡಕ್ಕೆ ಇಬ್ಬರು ಮೃತಪಟ್ಟಿದ್ದಾರೆ.

Advertisement

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಂದಿಹಳ್ಳಿ ಸಮೀಪ ಮರವೊಂದು ಕಾರಿನ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿನ್ನಮ್ಮ (55), ಮೇನಕಾ (30) ಮೃತಪಟ್ಟವರು. ಕಾರಿನಲ್ಲಿ ಸ್ವಗ್ರಾಮ ಹೊಂಕರವಳ್ಳಿಗೆ ವಾಪಸ್‌ ಆಗುವಾಗ ಬಿರುಗಾಳಿ ಬೀಸಿದ ಪರಿಣಾಮ ಕುನಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಬಂದಿಹಳ್ಳಿ ಗ್ರಾಮದ ಸಮೀಪ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಕಾರಿನ ಹಿಂದಿನ ಸೀಟಿನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ವಸಂತ ಹಾಗೂ ಮುಂದಿನ ಸೀಟಿನಲ್ಲಿದ್ದ ಸಂಬಂಧಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತುಮಕೂರು ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಮಳೆ ಸುರಿದು ಮರಗಳು ಧರೆಗುರುಳಿವೆ. ಈ ಮಧ್ಯೆ ಭಾನುವಾರ ಹಾಸನ,ಚಾಮರಾನಗರ, ರಾಮನಗರ, ಮೈಸೂರು, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ,ಹರಪನಹಳ್ಳಿಯಲ್ಲಿ ಮಳೆಯಾಗಿದೆ. ಹಾಸನದಲ್ಲಿ ಗರಿಷ್ಠ 60 ಮಿ.ಮೀ.ಮಳೆ ದಾಖಲಾಗಿದೆ. ಇನ್ನೂ ಮೂರ್‍ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next