Advertisement

ದ್ವಿದಳ ಧಾನ್ಯ ಕಟಾವಿಗೆ ಮಳೆ ಕಾಟ

08:52 AM Jul 18, 2020 | Suhan S |

ಯಳಂದೂರು: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ, ದ್ವಿದಳ ಧಾನ್ಯ ಕಟಾವಿಗೆ ಮುಳುವಾಗಿದೆ. ಜೊತೆಗೆ ಬೆಲೆಯೂ ಕಡಿಮೆಯಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ತಾಲೂಕಿನಲ್ಲಿ ವಾಡಿಕೆ ಮಳೆ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚಾಗಿದೆ. ಮಳೆಯಿಂದ ಯಳಂದೂರು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಬಾರಿ ದ್ವಿದಳ ಧಾನ್ಯದ ಬಿತ್ತನೆ ಅಧಿಕವಾಗಿದೆ. ಆದರೆ ಕಟಾವಿಗೆ ಬಂದಿದೆ. ಆದರೆ, ಕಳೆದ ಒಂದು ವಾರದಿಂದಲೂ ಇಲ್ಲಿ ತುಂತುರು, ಬಿರುಸು ಮಳೆ ಸುರಿಯುತ್ತಿದೆ. ಹೆಸರು, ಉದ್ದು, ಅಲಸಂದೆ ಬೆಳೆ ಕಟಾವು ಮಾಡಿರುವ ರೈತರು ಇದನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ, ಜಮೀನುಗಳಲ್ಲಿ ಇದನ್ನು ಗುಡ್ಡೆ ಮಾಡಿ ಪ್ಲಾಸ್ಟಿಕ್‌ ಟಾರ್ಪಲ್‌ ಹೊದಿಸಿ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ. ಈ ಬಾರಿ 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು, ಅಲಸಂದೆ ಹಾಗೂ ಹೆಸರು ಕಾಳು ಬಿತ್ತನೆ ಮಾಡಲಾಗಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆಯೂ ರೈತರಲ್ಲಿ ಮೂಡಿದೆ.

ಕಡಿಮೆಯಾದ ಬೆಲೆ: ತಾಲೂಕಿನಲ್ಲಿ 1925 ಹೆಕ್ಟೇರ್‌ ನಲ್ಲಿ ಉದ್ದು, 1080 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಕಾಳು 110 ಹೆಕ್ಟೇರ್‌ ಪ್ರದೇಶದಲ್ಲಿ ಅಲಸಂದೆ ಬೆಳೆಯಲಾಗಿದೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರೂ ಇದ್ದಾರೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳಿಗೆ ರೈತರು ಬೆಳೆದಿರುವ ಧಾನ್ಯಗಳ ಸಾಗಾಣಿಕೆ ಕಡಿಮೆಯಾಗಿದೆ. ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ದಲ್ಲಾಳಿಗಳು ನಿಗದಿ ಮಾಡುವ ಕಡಿಮೆ ಬೆಲೆಗೆ ಧಾನ್ಯ ಮಾರುವ ಅನಿವಾರ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next