Advertisement

Rain ಕುಂದಾಪುರ, ಬೈಂದೂರು, ಹೆಬ್ರಿ: ಗಾಳಿ-ಮಳೆ ಅಬ್ಬರ; ಅಪಾರ ಹಾನಿ

12:07 AM May 15, 2024 | Team Udayavani |

ಕುಂದಾಪುರ, ಹೆಬ್ರಿ, ಸಿದ್ಧಾಪುರ: ಬೈಂದೂರು, ಕುಂದಾಪುರ, ಹೆಬ್ರಿ ತಾಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನದ ಅನಂತರ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಯಿತು.

Advertisement

ಕೆಲವೆಡೆ ಸುಂಟರಗಾಳಿ ಬೀಸಿದ್ದು, ಹೊಸಂಗಡಿ ಗ್ರಾಮದ ಪ್ರೇಮಾ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಉಳ್ಳೂರು ಗ್ರಾಮದ ಲಚ್ಚ ಹಾಂಡ್ತಿ ಅವರ ಮನೆಯ ಶೀಟ್‌ ಕೂಡ ಹಾರಿಹೋಗಿದೆ. ಗಾಳಿ- ಮಳೆಗೆ ಆಜ್ರಿ ಮತ್ತಿತರ ಕಡೆಗಳಲ್ಲಿ ಅಡಿಕೆ ತೋಟ, ಬಾಳೆ ಗಿಡಗಳಿಗೆ ಹಾನಿ ಉಂಟಾಗಿದೆ.

ಹೆಬ್ರಿ ಸಮೀಪದ ವಂಡರ್‌ಬೆಟ್ಟು ಸರಕಾರಿ ಹಿ.ಪ್ರಾ. ಶಾಲೆಯ ರಂಗ ಮಂದಿರದ ಶೀಟಿನ ಮೇಲ್ಛಾವಣಿ ಹಾರಿ ಹೋಗಿದೆ. ಕರಾಡಿಯ ವಾದಿರಾಜ್‌ ಶೆಟ್ಟಿ, ಗೋಪಾಲ ಪೂಜಾರಿ ಅವರ ಅಡಿಕೆ ತೋಟಗಳಿಗೆ ಹಾನಿಯಾಗಿದೆ.

ಮುದ್ದೂರು: ಸಿಡಿಲು ಬಡಿದು ಹಸು ಸಾವು
ಬ್ರಹ್ಮಾವರ: ಸಿಡಿಲು ಬಡಿದು ಹಸು ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದ ಮುದ್ದೂರಿನಲ್ಲಿ ಸಂಭವಿಸಿದೆ. ನಾಗಪ್ಪಯ್ಯ ಶ್ಯಾನುಭೋಗ ಅವರ ಮನೆ ಹಾಗೂ ದನದ ಕೊಟ್ಟಿಗೆಗೆ ಸಿಡಿಲ ಆಘಾತ ಆಗಿದ್ದು, 7 ವರ್ಷದ ಜರ್ಸಿ ಮಿಶ್ರತಳಿಯ ಹಸು ಮೃತಪಟ್ಟಿದೆ. ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next