Advertisement

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

01:39 AM May 08, 2024 | Team Udayavani |

ಮಂಗಳೂರು/ಬೆಳ್ತಂಗಡಿ/ಕಾಸರಗೋಡು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ವಿವಿಧೆಡೆ ಮಂಗಳವಾರ ಮಳೆ ಸುರಿದಿದೆ.

Advertisement

ಬೆಳ್ತಂಗಡಿ ತಾಲೂಕಿನ ಶಿರ್ಲಾಲು, ಕರಂಬಾರು, ಮದ್ದಡ್ಕ, ನಾರಾವಿ, ಅಳದಂಗಡಿ, ಉಜಿರೆ, ಕರಂಬಾರು, ಬೆಳ್ತಂಗಡಿ ಪೇಟೆ, ಉಜಿರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.

ದ.ಕ.ದಲ್ಲಿ ಮುಂಜಾನೆ ಮೋಡಕವಿದ ವಾತಾವರಣ ಕಂಡು ಬಂದಿದ್ದು, ರಾಮಕುಂಜ,  ಪಾಣಾಜೆ, ಸುಳ್ಯದ ಕೆಲವೆಡೆ ಹನಿಮಳೆಯಾಗಿದೆ. ಬುಧವಾರವೂ ದ.ಕ., ಉಡಪಿ ಜಿಲ್ಲೆಯ ವಿವಿಧೆಡೆ ಹಗುರದಿಂದ ಸಾಧಾರಣ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 34.7 ಡಿ.ಸೆ. ಮತ್ತು ಕನಿಷ್ಠ ತಾಪಮಾನ 27.9 ಡಿ.ಸೆ. ದಾಖಲಾಗಿದೆ. ಕರಾವಳಿಯಲ್ಲಿ ಬಿಸಿ ಮತ್ತು ಆದ್ರತೆಯ ಪರಿಸ್ಥಿತಿಯೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾನ್ಯ: ಸಿಡಿಲು ಬಡಿದು ಗಾಯ
ಕಾಸರಗೋಡು ಸಹಿತ ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಗ್ಗೆ ಗುಡುಗು ಸಿಡಿಲು ಸಹಿತ ಸಾಮಾನ್ಯ ಮಳೆಯಾಗಿದೆ. ಮಾನ್ಯ ಮೇಗಿನಡ್ಕದ ನಾರಾಯಣ ನಾಯ್ಕ ಅವರ ಮನೆ ಸಿಡಿಲು ಬಡಿದು ಹಾನಿಗೀಡಾಗಿದೆ. ಕಿಟಕಿ ಸಮೀಪ ಮಲಗಿದ್ದ ನಾರಾಯಣ ನಾಯ್ಕ ಗಾಯಗೊಂಡಿದ್ದಾರೆ. ಕಿಟಕಿ, ಗೋಡೆ, ವಿದ್ಯುತ್‌ ಮೀಟರ್‌ ಹಾಗೂ ವಯರಿಂಗ್‌ ಉರಿದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮಳೆ ನೀರು ಹರಿದು ಹೋಗದೆ ಚೆರ್ಕಳ ಪೇಟೆಯ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.

Advertisement

ಬಾನಿಗೆ ಕೆಂಬಣ್ಣ
ಸುಳ್ಯ: ಸುಳ್ಯ ಹಾಗೂ ಸುಬ್ರಹ್ಮಣ್ಯ ಪರಿಸರದ ಕೆಲವೆಡೆ ಬಾನು ಕೆಂಪು ಬಣ್ಣದಿಂದ ಗೋಚರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ಕೆಲವೆಡೆ ಸಂಜೆ 7ರ ಸುಮಾರಿಗೆ ಬಾನು
ಕೆಂಪು ಬಣ್ಣಕ್ಕೆ ತಿರುಗಿದೆ. ಸ್ಥಳೀಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next