Advertisement

ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆ

12:30 AM Feb 07, 2019 | |

ಮಡಿಕೇರಿ/ಚಿಕ್ಕಮಗಳೂರು: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಬುಧವಾರ ಈ ವರ್ಷದ ಮೊದಲ ಮಳೆಯಾಗಿದ್ದು, ಜನತೆ ಹರ್ಷಗೊಂಡಿದ್ದಾರೆ. ಮಡಿಕೇರಿಯಲ್ಲಿ ಸಂಜೆಯ ವೇಳೆ ಹನಿ ಮಳೆಯಾಗಿದ್ದರೆ, ನಾಪೋಕ್ಲು ಸುತ್ತಮುತ್ತ ಸಾಧಾರಣ ಮಳೆಯಾಗುವ ಮೂಲಕ ಕೊಂಚ ತಂಪಿನ ವಾತಾವರಣ ಮೂಡಿತು. 

Advertisement

ಚಿಕ್ಕಮಗಳೂರಿನ ಮೂಡಿಗೆರೆ, ಎನ್‌.ಆರ್‌. ಪುರ, ಕೊಪ್ಪದ ಕೆಲವು ಕಡೆ ಸಾಧಾರಣ ಮಳೆಯಾಗಿದೆ.  ಅಕಾಲಿಕ ಮಳೆಯಿಂದ ಜನಸಾಮಾನ್ಯರ ಮೊಗದಲ್ಲಿ ಹರ್ಷ ಮೂಡಿದರೂ ಕಾಫಿ ಬೆಳೆಗಾರರು ಒಂದಷ್ಟು ಆತಂಕಕ್ಕೆ ಸಿಲುಕಿದ್ದಾರೆ. ಕಣದಲ್ಲಿ ಒಣಗುತ್ತಿರುವ ಕಾಫಿ ಫ‌ಸಲು ಒದ್ದೆಯಾಗಿದ್ದರೆ, ಅದಾಗಲೇ ಹಣ್ಣಾಗಿರುವ ಕರಿಮೆಣಸು ಫ‌ಸಲು ಉದುರುವುದಕ್ಕೆ ಕಾರಣವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿತ್ತಾದರೂ, ಏಕಾಏಕಿ ಮಳೆಯಾಗುತ್ತದೆಂಬ ನಿರೀಕ್ಷೆ ಇರಲಿಲ್ಲ. ಬುಧವಾರ ಅಪರಾಹ್ನ ನಾಪೋಕ್ಲು ವ್ಯಾಪ್ತಿಯಲ್ಲಿ ಗುಡುಗು ಸಹಿತ ಸುರಿದ ಮಳೆಗೆ ಬೆಳೆಗಾರರ ಮುಖದಲ್ಲಿ ಸಂಭ್ರಮದ ಬದಲು, ಆತಂಕ ಮೂಡಿತು.

ಸಾಮಾನ್ಯವಾಗಿ ಮಾರ್ಚ್‌ ಅಥವಾ ಎಪ್ರಿಲ್‌ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಮೊದಲ ಮಳೆಯಾಗುತ್ತಿತ್ತು. ಆ ಮೂಲಕ ಕಾಫಿ ಗಿಡಗಳಲ್ಲಿ ಮುಂದಿನ ವರ್ಷದ ಭವಿಷ್ಯ ಅರಳುತ್ತಿತ್ತು. ಆದರೆ, ಬೆಳೆಗಾರರು ಇನ್ನೂ ಕೊನೇ ಹಂತದ ಪ್ರಕ್ರಿಯೆಯಲ್ಲಿರುವಾಗಲೇ ವರ್ಷಾಧಾರೆಯಾಗಿರುವುದು ಒಂದಿಷ್ಟು ಸಮಸ್ಯೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next