Advertisement

ಚಿಕ್ಕಮಗಳೂರು : ಮಲೆನಾಡಿನಲ್ಲಿ ಭಾರೀ ಮಳೆ |ಮಹಲ್ಗೋಡು ಸೇತುವೆ ಮುಳುಗಡೆ

08:29 PM Oct 11, 2021 | Team Udayavani |

ಚಿಕ್ಕಮಗಳೂರು : ಮಲೆನಾಡಲ್ಲಿ ಸಂಜೆ  ಸುರಿದ ಭಾರೀ ಮಳೆಯಿಂದ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದೆ. ಧಾರಾಕಾರ ಮಳೆಗೆ ಸೇತುವೆ ಪಕ್ಕದ ಹಳ್ಳ ತುಂಬಿ ಹರಿದಿದೆ.

Advertisement

ಇನ್ನು ತುಂಬಿ ಹರಿಯುತ್ತಿದ್ದ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರರು ತಮ್ಮ ಜೀವಕ್ಕೆ ಆಪತ್ತು ತಂದುಕೊಂಡರು. ನೀರಿನ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಮೋರಿಗೆ ಬೈಕ್ ಸಿಲುಕಿಕೊಂಡಿತು. ಹಗ್ಗದ ಸಹಾಯದಿಂದ ಸ್ಥಳೀಯರು ಬೈಕ್ ಸವಾರರನ್ನು ರಕ್ಷಣೆ ಮಾಡಿದರು.

ಇನ್ನು ಮಳೆಯಿಂದಾಗಿ ಬಾಳೆಹೊನ್ನೂರು‌-ಕಳಸ ಸಂಪರ್ಕ ಕಡಿತಗೊಂಡಿತು.ಸೇತುವೆ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next