Advertisement

ಭಾಶಿ-ಗುಡ್ನಾಪುರದಲ್ಲಿ ಮಳೆ: ಭತ್ತ, ಅಡಕೆಗೆ ಹಾನಿ

10:51 PM Dec 31, 2019 | Team Udayavani |

ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ ಒಂದೆಡೆಗೆ ಚಳಿ ಹೆಚ್ಚಾಗಿ ಇಬ್ಬನಿ ಹನಿಗಳು ಬಿದ್ದಿದ್ದರೆ, ಇನ್ನೊಂದೆಡೆ ಕೆಲವು ಹಳ್ಳಿಗಳಲ್ಲಿ ಅಕಾಲಿಕ ಮಳೆ ಬಿದ್ದಿದೆ. ಸೋಮವಾರ ಸಂಜೆ ಭಾಶಿ ಹಾಗೂ ಗುಡ್ನಾಪುರ ಭಾಗದಲ್ಲಿ ಮಳೆಯಾಗಿದ್ದು ಕಟಾವು ಮಾಡಿದ ಭತ್ತದ ಬೆಳೆ, ಕೊಯ್ದ ಅಡಕೆಗೆ ಭಾರೀ ನಷ್ಟವನ್ನುಂಟು ಮಾಡಿದೆ. ವಾರದ ಹಿಂದೆ ತಾಲೂಕಿನ ಜಾನ್ಮನೆ ಹೋಬಳಿಯಲ್ಲಿ ಮಳೆಯಾಗಿತ್ತು. ಇದರಿಂದ ಭತ್ತದ ಗದ್ದೆಗಳು ತೊಯ್ದು ತೊಪ್ಪೆಯಾಗಿದ್ದವು.

Advertisement

ಇದೀಗ ಭಾಶಿ, ಗುಡ್ನಾಪುರ ಗ್ರಾಪಂ ಭಾಗದಲ್ಲೂ ಮಳೆಯಾಗಿದ್ದು, ರೈತರನ್ನು ಆತಂಕಕ್ಕೆ ಸಿಲುಕಿಸಿದೆ. ಭಾಶಿಯಲ್ಲಿ ಸೋಮವಾರ 18 ಮಿ.ಮೀ. ಮಳೆಯಾಗಿದ್ದರೆ, ಗುಡ್ನಾಪುರದಲ್ಲಿ 23ಮಿ.ಮೀ. ಮಳೆ ಬಿದ್ದಿದೆ. ವರದಾ ನದಿ ಉಕ್ಕಿ ಮಳೆಗಾಲದಲ್ಲಿ ಸಮಸ್ಯೆ ಮಾಡಿದ್ದರೆ, ಈಗ ಮಶಿನ್‌ನಲ್ಲಿ ಕೊಯ್ಲು ಮಾಡಬೇಕೆಂದುಕೊಂಡಿದ್ದ ರೈತರಿಗೆ ಸಕಾಲಕ್ಕೆ ದೊರೆಯದೆ ಕೊಯ್ಲು ಸ್ವಲ್ಪ ವಿಳಂಬವಾಗಿದೆ. ಇದೀಗ ಅವರೇ ಸ್ವತಃ ಕೊಯ್ಲಿಗೆ ಮುಂದಾಗಿದ್ದು, ಮಳೆಯಲ್ಲಿ ನೆನೆಯುವಂತಾಗಿದೆ ಎನ್ನುತ್ತಾರೆ ಭಾಶಿ ರೈತ ಕಿರಣ ನಾಯ್ಕ ಹಾಗೂ ಇತರರು.

Advertisement

Udayavani is now on Telegram. Click here to join our channel and stay updated with the latest news.

Next