Advertisement

Rain ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ

10:34 PM Jul 04, 2024 | Team Udayavani |

ಮಹಾಲಿಂಗಪುರ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮಳೆಯಾಗಿ ಮತ್ತು ಅಂತರಾಜ್ಯದಲ್ಲಿ ಮಳೆಯಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಪ್ರವಾಹ ಬಂದು ಮಹಾಲಿಂಗಪುರ ಸುತ್ತಮುತ್ತಲಿನ ಗ್ರಾಮಗಳು ಪ್ರವಾಹ ಎದುರಿಸುವದರಿಂದ ವಿಪತ್ತು ನಿರ್ವಹಣೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.

Advertisement

ಪುರಸಭೆಯಲ್ಲಿ ಜರುಗಿದ ಸ್ಥಳೀಯ ಮಟ್ಟದ ಅ ಧಿಕಾರಿಗಳ ವಿಪತ್ತು ನಿರ್ವವಣಾ ಮುಂಜಾಗ್ರತೆಯ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರರಾಜ್ಯಗಳ ಜಲಾಶಯಗಳಿಂದ ನದಿಗಳಿಗೆ ನೀರು ಬಿಡುವುದರಿಂದ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದರಿಂದ ಜನ, ಜಾನುವಾರು, ಆಸ್ತಿಹಾನಿ, ಪ್ರಾಣಹಾನಿ, ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತೆಗಾಗಿ ಕೆೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ.ವಜ್ಜರಮಟ್ಟಿ ಮಾತನಾಡಿ, ರೋಗರುಜಿನಗಳು ಹರಡದಂತೆ ನಿಯಂತ್ರಣ ಹಾಗೂ ವೈದ್ಯಕೀಯ ಉಪಚಾರವನ್ನು ಸಕಾಲಕ್ಕೆ ಒದಗಿಸಲಾಗುವುದು ಎಂದರು.

ಹೆಸ್ಕಾಂನ ಸೆಕ್ಷನ್‌ ಆಫೀಸರ್‌ ಆರ್‌.ಆರ್‌.ಬಾಗೋಜಿ ಮಾತನಾಡಿ, ಮಳೆ ಗಾಳಿಗೆ ಕಂಬ ಬಿದ್ದರೆ, ತಂತಿಗಳು ಹರಿದರೆ ತಕ್ಷಣ ದುರಸ್ಥಿ ಮಾಡಲಾಗುವುದು.ಈಗಾಗಲೇ ಜನನಿಬೀಡ ಪ್ರದೇಶಗಳಲ್ಲಿನ ಟಿಸಿಗಳನ್ನು ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ವಿದ್ಯುತ್‌ ತಂತಿಗಳಿಗೆ ತಾಗುವು ಗಿಡಗಳನ್ನು ತೆರವುಗೊಳಿಸುವ ಕೆಲಸ ನಡೆದಿದೆ. ವಿದ್ಯುತ್‌ ಅಪಾಯಕ್ಕೆ ಸಂಬಂಸಿದ ವಿಷಯಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು.

ನೀರಾವರಿ ಇಲಾಖೆಯ ವೆಂಕಟೇಶ ಬೆಳಗಲ್ ಮಾತನಾಡಿ ಕಾಲುವೆಯ ನೀರು ಕೆಂಗೇರಿಮಡ್ಡಿಯ ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗು ಸಾಧ್ಯತೆ ಇರುವದರಿಂದ, ನೀರು ನಿಲ್ಲದಂತೆ ಅಗತ್ಯ ಮುನ್ನಚ್ಚರಿಕೆವಹಿಸಲಾಗುವುದು ಎಂದರು.

Advertisement

ಮಹಾಲಿಂಗಪುರ ಗ್ರಾಮಲೆಕ್ಕಾಧಿಕಾರಿ ಎಂ.ಎಸ್. ನೀಲನ್ನವರ ಮಾತನಾಡಿ ಬಿದ್ದ ಮನೆಗಳು ಹಾಗೂ ಶೀಥಿಲಾವಸ್ಥೆಯಲ್ಲಿನ ಮನೆಗಳನ್ನು ಸರ್ವೇ ಮಾಡಿ ವರದಿ ಸಲ್ಲಿಸುತ್ತೇವೆ ಎಂದರು.

ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ವ್ಹಿ.ಎಸ್.ಮಂಜೂರಕರ ಮಾತನಾಡಿ ಅಂಗನವಾಡಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಮಾಡುತ್ತೇವೆ ಎಂದರು.

ಪುರಸಭೆಯ ವಿಪತ್ತು ನಿರ್ವಹಣಾ ಸಹಾಯವಾಣಿ ಸಿಬ್ಬಂದಿ ಎಸ್‌.ಎಂ.ಕಲಬುರ್ಗಿ, ಎಂ.ಎಂ.ಮೂಗಳಖೋಡ, ಎಂ.ಕೆ.ದಳವಾಯಿ, ಆರ್.ಕೆ.ಮಾಂಗ ಅವರ ಮೂಲಕ ಅತಿವೃಷ್ಟಿ ವಿಪತ್ತಿನಿಂದಾಗುವು ಅನಾಹುತಗಳನ್ನು ತಡೆಯಲು ಪ್ರಯತ್ನಿಸುತ್ತೇವೆ ಎಂದು ಪುರಸಭೆಯ ವ್ಯವಸ್ಥಾಪಕ ಎಸ್‌.ಎನ್‌.ಪಾಟೀಲ ತಿಳಿಸಿದರು.

ಪುರಸಭೆ ಸದಸ್ಯ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವಮಠ ಮಾತನಾಡಿದರು. ಪುರಸಭೆ ಸದಸ್ಯ ರಾಜು ಗೌಡಪ್ಪಗೋಳ, ಶಿಕ್ಷಕ ಎಂ.ಡಿ.ಕಾಮರಡ್ಡಿ, ಗ್ರಾಮಲೆಕ್ಕಾಧಿಕಾರಿ ಟಿ.ಎಂ.ದೇವರಮನಿ, ಬಸರಿಗಿಡದ, ಸಮಾಜ ಕಲ್ಯಾಣ ಇಲಾಖೆಯ ವಿ.ಎ.ಬುದ್ನಿ ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next