Advertisement

ಹೆಜಮಾಡಿ: ಕಡಲ್ಕೊರೆತ

11:02 AM Aug 10, 2018 | Team Udayavani |

ಪಡುಬಿದ್ರಿ: ಹೆಜಮಾಡಿ ಗ್ರಾಮದ ಅಮಾವಾಸೆಕರಿಯದ ದಕ್ಷಿಣ ಭಾಗದ ಸುಮಾರು 200 ಮೀ. ಪ್ರದೇಶದಲ್ಲಿ ಕಡಲ್ಕೊರೆತ ಸಂಭವಿಸಿದ್ದು, ಐದಾರು ತೆಂಗಿನ ಮರಗಳು ಹಾಗೂ ಗಾಳಿ ಮರಗಳು ಸಮುದ್ರಕ್ಕೆ ಆಹುತಿಯಾಗಿವೆ.  ಈ ಹಿಂದೆ ಹಾಕಿದ್ದ ಬಂಡೆಗಲ್ಲಿನ ತಡೆಗೋಡೆಯನ್ನು ಸೀಳಿ ಒಳನುಗ್ಗುತ್ತಿರುವ ಸಮುದ್ರದಲೆಗಳು ತೀರ ಪ್ರದೇಶವನ್ನು ನುಂಗುತ್ತಿದೆ. ಮೀನುಗಾರಿಕಾ ರಸ್ತೆಯೂ ಅಪಾಯದ ಸ್ಥಿತಿಯಲ್ಲಿದೆ. 

Advertisement

ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌ ಸ್ಥಳಕ್ಕೆ ಭೇಟಿ ನೀಡಿದ್ದು, ವಿವಿಧ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಕಿನಾರೆಯಲ್ಲಿ ಸುಮಾರು ಮೂರು ದಶಕಗಳ ಹಿಂದೆ ಹಾಕಲಾಗಿದ್ದ ಬಂಡೆಗಲ್ಲುಗಳು ಸಮುದ್ರ ಸೇರಿವೆ. ತೀರ ಪ್ರದೇಶದಲ್ಲಿ ಆಳವಾದ ಕಂದಕ ಸೃಷ್ಟಿಯಾಗಿದ್ದು, ಇದರಿಂದಾಗಿ ಮತ್ತಷ್ಟು ಭಾರೀ ಅಲೆಗಳು ದಡವನ್ನು ಅಪ್ಪಳಿಸುವಂತಾಗಿದೆ ಎಂದು ಮೊಗವೀರ ಮುಖಂಡರು ಹೇಳಿದ್ದಾರೆ. 

ಕೊಲ್ಲೂರು: ಗಾಳಿ-ಮಳೆ; ಅಂಗಡಿಗಳಿಗೆ ಹಾನಿ


ಕೊಲ್ಲೂರು: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಮುದೂರಿನ ಉದಯ ನಗರ ಎಂಬಲ್ಲಿ ಗುರುವಾರ ಬೆಳಗ್ಗೆ ದಿಢೀರ್‌ ಆಗಿ ಬೀಸಿದ ಭಾರೀ ಗಾಳಿ ಮಳೆಗೆ ಹಲವು ಅಂಗಡಿಗಳು, ವಿದ್ಯುತ್‌ ಕಂಬಗಳು ಜಖಂಗೊಂಡು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅಂಗಡಿಗಳ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿಹೋಗಿದ್ದು, ಅಂಗಡಿಯ ಒಂದು ಪಾರ್ಶ್ವದ ಗೋಡೆ ಬಿರುಕುಬಿಟ್ಟಿದೆ. ಬೆಲೆ ಬಾಳುವ ಸಾಮಗ್ರಿಗಳು ನಾಶವಾಗಿವೆ. ಹಲವು ಮನೆಗಳ ಮೇಲ್ಛಾವಣಿ ಶೀಟ್‌ಗಳು ಹಾರಿಹೋಗಿವೆ. ಜಡ್ಕಲ್‌ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next