Advertisement

ಮಳೆ ಹಾನಿ; ಜನರನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ: ಸಿಎಂ

08:13 PM Jul 08, 2022 | Team Udayavani |

ಬೆಂಗಳೂರು: ಮಲೆನಾಡು, ಕರಾವಳಿಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ.13 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ 17 ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಜೂನ್ ನಿಂದ 12 ಜನ ಸಾವಿಗೀಡಾಗಿದ್ದಾರೆ. 65. ಜಾನುವಾರು ಸಾವಿಗೀಡಾಗಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ಮಣ್ಣು ಕುಸಿತ ಆಗುವ ಕೆಳಗಿನ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ. ಮನೆ ಹಾನಿಯಾಗಿದ್ದರೆ ತಕ್ಷಣ 10 ಸಾವಿರ ನೀಡಲು ತೀರ್ಮಾನ, ಮಳೆ ನಿಂತ ನಂತರ ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದರು.

ಎಸ್ ಡಿ ಆರ್ ಎಫ್ ತಂಡ ಉತ್ತರ ಕನ್ನಡದಲ್ಲಿದೆ. ಎನ್ ಡಿ ಆರ್ ಎಎಫ್ ತಂಡ ಮಂಗಳೂರು, ಕೊಡಗಿನಲ್ಲಿದೆ. ಎಸ್ಕಾಂ ಎಂಡಿ ಗಳಿಗೆ ವಿದ್ಯುತ್ ಕಂಬ ಸರಿಪಡಿಸಲು ಸೂಚಿಸಲಾಗಿದೆ. ಕಡಲ ಕೊರೆತ ಉಂಟಾದರೆ ತಾತ್ಕಾಲಿಕವಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ನಂತರ ಶಾಶ್ವತ ಕ್ರಮಕ್ಕೆ ಅಂದಾಜು ಮಾಡಲು ಸೂಚನೆ ನೀಡಲಾಗಿದೆ ಎಂದರು.

ಮುಳುಗಡೆಯಾಗುವ ಗ್ರಾಮಗಳಲ್ಲಿ ಎಸ್ ಡಿ ಆರ್ ಎಫ್ ತಂಡ ಕಳಿಸಲು ಸೂಚನೆ ನೀಡಲಾಗಿದ್ದು, 735 ಕೋಟಿ ರೂ. ಜಿಲ್ಲಾಧಿಕಾರಿಗಳ ಬಳಿ ಇದೆ. ಮೂರು ಹಂತದಲ್ಲಿ ಮಳೆಯಾಗುತ್ತಿದೆ. ವ್ಯಾಪಕವಾಗಿ ಮೂರು ನಾಲ್ಕು ದಿನ ಆಗುವ ಸಾಧ್ಯತೆ ಇದೆ. ಎರಡು ಮೂರು ದಿನದಲ್ಲಿ ಪೂರ್ಣ ನಷ್ಟ ಪತ್ತೆ ಹಚ್ಚಲಾಗುವುದು. ಮಹಾರಾಷ್ಟ್ರ ದಿಂದ ಇನ್ನೂ ಕೊಯ್ನಾದಿಂದ ನೀರು ಬಿಟ್ಟಿಲ್ಲ. ಕೊಲ್ಲಾಪುರ, ಸೊಲ್ಲಾಪುರ ಡಿಸಿಗಳ ಜೊತೆ ಸಂಪರ್ಕದಲ್ಲಿ ಇರಬೇಕು ಅಂತ ಹೇಳಿದ್ದೇನೆ, ಕಾರ್ಯದರ್ಶಿಗಳೂ ಸಂಪರ್ಕದಲ್ಲಿ ಇರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next